ಸ್ವಾತಂತ್ರ್ಯವೀರ ಸಾವರ್ಕರ್ ಅವರ ‘ಅನಾದಿ ಮೀ, ಅನಂತ ಮೀ’ ಗೀತೆಗೆ ಪುರಸ್ಕಾರ!

ಮುಂಬಯಿ – ಮಹಾರಾಷ್ಟ್ರ ಸರಕಾರದ ಸಾಂಸ್ಕೃತಿಕ ಕಾರ್ಯ ಇಲಾಖೆಯು ‘ಛತ್ರಪತಿ ಸಂಭಾಜಿ ಮಹಾರಾಜ ಮಹಾರಾಷ್ಟ್ರ ಪ್ರೇರಣಾ ಗೀತೆ ಪುರಸ್ಕಾರ’ ಘೋಷಿಸಿದೆ. 2025 ರಿಂದ ಈ ಪುರಸ್ಕಾರವನ್ನು ಪ್ರಾರಂಭಿಸಲಾಗುತ್ತಿದ್ದು, ಮೊದಲ ಪುರಸ್ಕಾರವನ್ನು ಸ್ವಾತಂತ್ರ್ಯವೀರ ಸಾವರ್ಕರ್ ಅವರು ಬರೆದ ‘ಅನಾದಿ ಮೀ, ಅನಂತ ಮೀ, ಅವಧ್ಯ ಮೀ ಭಲಾ..’ ಈ ಅಮರ ಗೀತೆಗೆ ನೀಡುವ ಘೋಷಣೆಯನ್ನು ಸಾಂಸ್ಕೃತಿಕ ಕಾರ್ಯ ಸಚಿವ ಆಶಿಶ್ ಶೆಲಾರ್ ಮಾಡಿದ್ದಾರೆ. ಬ್ರಿಟಿಷರ ಹಿಡಿತದಿಂದ ತಪ್ಪಿಸಿಕೊಳ್ಳಲು ಸ್ವಾತಂತ್ರ್ಯವೀರ ಸಾವರ್ಕರ್ ಅವರು ಯಾವ ಸ್ಥಳದಲ್ಲಿ ಸಮುದ್ರಕ್ಕೆ ಜಗತ್ಪ್ರಸಿದ್ಧ ಜಿಗಿತವನ್ನು ಮಾಡಿದ್ದರೋ, ಆ ಫ್ರಾನ್ಸ್ನ ಮಾರ್ಸೆಲಿಸ್ ಬಂದರಿನಿಂದ ಸಚಿವ ಆಶಿಶ್ ಶೆಲಾರ್ ಅವರು ಈ ಪುರಸ್ಕಾರವನ್ನು ಘೋಷಿಸಿದ್ದಾರೆ.
ಮಾರ್ಸೆಲಿಸ್ ಬಂದರಿನಲ್ಲಿ ಜಿಗಿದ ನಂತರ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಮತ್ತೆ ಬ್ರಿಟಿಷರ ಕೈಗೆ ಸಿಕ್ಕಿಬಿದ್ದರು. ಅವರ ಮೇಲೆ ಭಾರತದಲ್ಲಿ ಮೊಕದ್ದಮೆ ಹೂಡಲಾಯಿತು ಮತ್ತು ಅವರಿಗೆ 2 ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಜೀವನದ ಈ ಕಠಿಣ ಸಮಯದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರಿಗೆ ‘ಅನಾದಿ ಮೀ, ಅನಂತ ಮೀ, ಅವಧ್ಯ ಮೀ ಭಲಾ, ಮಾರಿಲ ರಿಪು ಜಗತಿ ಅಸಾ ಕವಣ ಜನ್ಮಲಾ’, ಈ ಆತ್ಮಬಲವನ್ನು ಹೆಚ್ಚಿಸುವ ಗೀತೆ ಸ್ಫೂರ್ತಿಯಾಯಿತು.
ಪುರಸ್ಕಾರದ ಸ್ವರೂಪ ಮತ್ತು ಆಯ್ಕೆಯ ಮಾನದಂಡಗಳನ್ನು ತಿಳಿಯಿರಿ!
ಸಾಂಸ್ಕೃತಿಕ ಕಾರ್ಯ ಇಲಾಖೆಯಿಂದ ಪ್ರತಿವರ್ಷ ‘ಛತ್ರಪತಿ ಸಂಭಾಜಿ ಮಹಾರಾಜ ಮಹಾರಾಷ್ಟ್ರ ಪ್ರೇರಣಾ ಗೀತೆ’ ಪುರಸ್ಕಾರವನ್ನು ನೀಡಲಾಗುತ್ತದೆ. 2 ಲಕ್ಷ ರೂಪಾಯಿಗಳು ಈ ಪುರಸ್ಕಾರದ ಮೊತ್ತವಾಗಿದ್ದು, ಇದನ್ನು ಗೀತೆ ರಚನೆಕಾರರಿಗೆ ನೀಡಲಾಗುತ್ತದೆ. ಯಾವ ಗೀತೆ ರಚನೆಕಾರರು ಬದುಕಿಲ್ಲವೋ, ಅವರ ವಾರಸುದಾರರಿಗೆ ಈ ಮೊತ್ತವನ್ನು ನೀಡಲಾಗುತ್ತದೆ. ಈ ಪುರಸ್ಕಾರಕ್ಕಾಗಿ ಗೀತೆಯನ್ನು ಆಯ್ಕೆ ಮಾಡಲು ಸಾಂಸ್ಕೃತಿಕ ಕಾರ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಪುರಸ್ಕಾರಕ್ಕೆ ಆಯ್ಕೆಯಾಗುವ ಗೀತೆಯು ಕನಿಷ್ಠ 5 ವರ್ಷಗಳ ಹಿಂದಿನದಾಗಿರಬೇಕು ಮತ್ತು ಮರಾಠಿ ಭಾಷೆಯಲ್ಲಿರುವುದು ಕಡ್ಡಾಯವಾಗಿರುತ್ತದೆ ಹಾಗೂ ಇದು ರಾಷ್ಟ್ರ ಕಾರ್ಯಕ್ಕೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುವಂತಿರಬೇಕು, ಇತ್ಯಾದಿ ಮಾನದಂಡಗಳನ್ನು ಪುರಸ್ಕಾರದ ಗೀತೆಗಾಗಿ ನಿರ್ಧರಿಸಲಾಗಿದೆ.
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.