ಅಲಿಗಡ ಮುಸ್ಲಿಂ ವಿದ್ಯಾಪೀಠದ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಇವರ ಕುರಿತಾದ ಚಲನಚಿತ್ರ ಪ್ರಸಾರ ಮಾಡಲು ದೂರದರ್ಶನದಿಂದ ನಿರಾಕರಣೆ !

ನವದೆಹಲಿ – ಅಲಿಗಡ ಮುಸ್ಲಿಂ ವಿದ್ಯಾಪೀಠದ ಸಂಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ (೧೮೧೭ -೧೮೯೮) ಇವರ ಕುರಿತು ಮೊದಲು ಆತ್ಮಚರಿತ್ರೆಯ ಚಲನಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಓಟಿಟಿ (ಓ ಟಿ ಟಿ ಎಂದರೆ ಓವರ್ ದ ಟಾಪ್’ ಆ್ಯಪ್ ಮೂಲಕ ಚಲನಚಿತ್ರ, ಧಾರಾವಾಹಿಗಳು ಮುಂತಾದ ಕಾರ್ಯಕ್ರಮ ನೋಡಬಹುದು.) ವೇದಿಕೆಯಲ್ಲಿ ಪ್ರಸಾರವಾಗಿದೆ; ಆದರೆ ದೂರದರ್ಶನ (ಪ್ರಸಾರ ಭಾರತೀಯು) ಓಟಿಟಿಯಲ್ಲಿ ಅದನ್ನು ಪ್ರಸಾರ ಮಾಡಲು ನಿರಾಕರಿಸಿದೆ. ‘ಸರ್ ಸೈಯದ್ ಅಹಮದ್ ಖಾನ್:’ ದ ಮಸೀಹಾ’. ಈ ಶೀರ್ಷಿಕೆಯ ಚಲನಚಿತ್ರದ ಪ್ರಕಾಶನ ಇತ್ತೀಚಿಗೆ ಅಲಿಗಡ ಮುಸ್ಲಿಂ ವಿದ್ಯಾಪೀಠದ ಕುಲಗುರು ನೈಮ ಖಾತೂನ್ ಇವರಿಂದ ಬಹಳ ಉತ್ಸಾಹದಲ್ಲಿ ಮಾಡಲಾಯಿತು.

ಈ ಚಲನಚಿತ್ರದ ನಿರ್ಮಾಪಕರು ಮತ್ತು ಮುಖ್ಯ ನಾಯಕ ಶೋಹೇಬ್ ಚೌಧರಿ ಇವರು, ದೂರದರ್ಶನಕ್ಕಾಗಿ ನಾನು ನಿರ್ಮಿಸಿರುವ ಒಂದು ಧಾರಾವಾಹಿ ದೂರದರ್ಶನದ ಇತಿಹಾಸದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಮಯ ಪ್ರಸಾರವಾಗಿತ್ತು; ಆದರೆ ದೂರದರ್ಶನದ ಓಟಿಟಿ ವೇದಿಕೆಯಲ್ಲಿ ಪ್ರಸಾರ ಮಾಡುವುದಕ್ಕಾಗಿ ನಾನು ತಯಾರಿಸುವ ಚಲನಚಿತ್ರ ಅಯೋಗ್ಯ ಎಂದು ಘೋಷಿಸಲಾಗಿದೆ, ಇದು ಆಘಾತಕಾರಿ ಆಗಿದೆ. ದೂರದರ್ಶನವು ಅವರ ರಾಜಕೀಯ ಮಾಲಕರನ್ನು ಸಂತೋಷ ಪಡಿಸುವುದಕ್ಕಾಗಿ ನನ್ನ ಪ್ರಸ್ತಾವ ನಿರಾಕರಿಸಿದ್ದಾರೆ’, ಎಂದು ಕಾಣುತ್ತದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ೧೯ ನೇ ಶತಮಾನದಲ್ಲಿ ಭಾರತದ ವಿಭಜನೆ ಮಾಡಿ ಮುಸಲ್ಮಾನರಿಗಾಗಿ ಬೇರೆ ದೇಶ ರೂಪಿಸಿರುವ ಕಲ್ಪನೆ ಮೊಟ್ಟಮೊದಲು ಸೈಯದ್ ಅಹಮದ್ ಖಾನ್ ಇವರೇ ಮಂಡಿಸಿದ್ದರು. ಇದನ್ನು ಭಾರತೀಯರು ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ದೂರದರ್ಶನವು ಅವರ ಕುರಿತಾದ ಚಲನಚಿತ್ರ ಪ್ರಸಾರಕ್ಕೆ ನಿರಾಕರಿಸಿದ್ದರೆ ಅವರನ್ನು ಬೆಂಬಲಿಸುವುದು ಆವಶ್ಯಕವಾಗಿದೆ !
  • ದೂರದರ್ಶನ ನಿರಾಕರಿಸಿದ್ದಕ್ಕೆ ಯಾವ ಜಾತ್ಯತೀತರಿಂದ ವಿರೋಧವಾದರೇ ಯಾವ ವ್ಯಕ್ತಿಯು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಬೇಡಿಕೆ ಸಲ್ಲಿಸಿದನು, ಅಂತಹ ಉದ್ಧಟನಿಗೆ ಬೆಂಬಲ ಇರುವುದರ ಬಗ್ಗೆ ಜನರೆ ಅವರಿಗೆ ಪ್ರಶ್ನೆ ಕೇಳಬೇಕು !