|

ಹಮೀರಪುರ್ (ಹಿಮಾಚಲ ಪ್ರದೇಶ) – ಹಮೀರಪುರ ಜಿಲ್ಲೆಯಲ್ಲಿನ ಸುಜಾನಪುರ್ ಇಲ್ಲಿಯ ಮಸೀದಿಯ ಎದುರು ಮಹಾರಾಣಾ ಪ್ರತಾಪ ಇವರ ಪುತ್ತಳಿ ಸ್ಥಾಪನೆಗೆ ಮುಸಲ್ಮಾನ ಸುಧಾರಣಾ ಸಭೆ ವಿರೋಧಿಸಿದೆ. ಈ ಪ್ರಕರಣದಲ್ಲಿ ಸುಧಾರಣಾ ಸಭೆಯ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಮನವಿ ನೀಡಿದ್ದಾರೆ. ಇದರ ನಂತರ ಜಿಲ್ಲಾಧಿಕಾರಿಗಳು ಈ ಪ್ರಕರಣ ಉಪಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೂ ಅವರು ಇದರ ಕುರಿತು ಕ್ರಮ ಕೈಗೊಳ್ಳುವರು.
ಮುಸಲ್ಮಾನ ಸುಧಾರಣಾ ಸಭೆಯ ಕಾರ್ಯದರ್ಶಿ ರಫೀಕ್ ಇವರ ಪ್ರಕಾರ, ನಗರದ ಸೌಂದರ್ಯೀಕರಣ ಮಾಡಲಾಗುತ್ತದೆ ಇದು ಒಳ್ಳೆಯ ವಿಷಯವಾಗಿದೆ ಮತ್ತು ನಗರ ಸುಂದರವಾಗಿರಬೇಕು. ಪುತ್ತಳಿ ಸ್ಥಾಪಿಸಲು ಯಾವುದೇ ಆಕ್ಷೇಪ ಇಲ್ಲ; ಆದರೆ ಅದನ್ನು ಮಸೀದಿಯ ಎದುರಿಗೆ ಸ್ಥಾಪಿಸಬಾರದು. ಸುತ್ತಮುತ್ತ ಪ್ರದೇಶದಲ್ಲಿ ಮುಸಲ್ಮಾನರು ಇಲ್ಲಿ ನಮಾಜ್ ಮಾಡಲು ಬರುತ್ತಾರೆ. ಮಸೀದಿಯ ಎದುರು ಮಹಾರಾಣಾ ಪ್ರತಾಪ್ ಇವರ ಪುತ್ತಳಿ ಇದ್ದರೆ ಆಗ ದ್ವೇಷದ ಭಾವನೆ ನಿರ್ಮಾಣ ಆಗಬಹುದು; ಆದ್ದರಿಂದ ಈ ಪುತ್ತಳಿಯನ್ನು ಬೇರೆ ಕಡೆಗೆ ಎಲ್ಲಿಯಾದರೂ ಸ್ಥಾಪನೆ ಮಾಡಬಹುದು. ಪುತ್ತಳಿ ಸ್ಥಾಪನೆಗೆ ನಮ್ಮದು ಯಾವುದೇ ಆಕ್ಷೇಪವಿಲ್ಲ; ಆದರೆ ಭವಿಷ್ಯದಲ್ಲಿ ವಿವಾದ ನಿರ್ಮಾಣ ಆಗಬಾರದೆಂದು ಅದರ ಸ್ಥಾನ ಬದಲಾವಣೆ ಆಗಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!