ಮಸೀದಿ ಎದುರು ಮಹಾರಾಣಾ ಪ್ರತಾಪ್ ರ ಪುತ್ತಳಿ ಸ್ಥಾಪನೆ ಮಾಡುವಂತಿಲ್ಲ; ಮುಸಲ್ಮಾನರಿಂದ ತಾಕಿತು

  • ಹಮೀರಪುರ್ (ಹಿಮಾಚಲ ಪ್ರದೇಶ) ಇಲ್ಲಿಯ ಘಟನೆ

  • ಪುತ್ತಳಿಯಿಂದ ದ್ವೇಷ ನಿರ್ಮಾಣವಾಗುವ ಸಾಧ್ಯತೆ !

ಹಮೀರಪುರ್ (ಹಿಮಾಚಲ ಪ್ರದೇಶ) – ಹಮೀರಪುರ ಜಿಲ್ಲೆಯಲ್ಲಿನ ಸುಜಾನಪುರ್ ಇಲ್ಲಿಯ ಮಸೀದಿಯ ಎದುರು ಮಹಾರಾಣಾ ಪ್ರತಾಪ ಇವರ ಪುತ್ತಳಿ ಸ್ಥಾಪನೆಗೆ ಮುಸಲ್ಮಾನ ಸುಧಾರಣಾ ಸಭೆ ವಿರೋಧಿಸಿದೆ. ಈ ಪ್ರಕರಣದಲ್ಲಿ ಸುಧಾರಣಾ ಸಭೆಯ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಮನವಿ ನೀಡಿದ್ದಾರೆ. ಇದರ ನಂತರ ಜಿಲ್ಲಾಧಿಕಾರಿಗಳು ಈ ಪ್ರಕರಣ ಉಪಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೂ ಅವರು ಇದರ ಕುರಿತು ಕ್ರಮ ಕೈಗೊಳ್ಳುವರು.

ಮುಸಲ್ಮಾನ ಸುಧಾರಣಾ ಸಭೆಯ ಕಾರ್ಯದರ್ಶಿ ರಫೀಕ್ ಇವರ ಪ್ರಕಾರ, ನಗರದ ಸೌಂದರ್ಯೀಕರಣ ಮಾಡಲಾಗುತ್ತದೆ ಇದು ಒಳ್ಳೆಯ ವಿಷಯವಾಗಿದೆ ಮತ್ತು ನಗರ ಸುಂದರವಾಗಿರಬೇಕು. ಪುತ್ತಳಿ ಸ್ಥಾಪಿಸಲು ಯಾವುದೇ ಆಕ್ಷೇಪ ಇಲ್ಲ; ಆದರೆ ಅದನ್ನು ಮಸೀದಿಯ ಎದುರಿಗೆ ಸ್ಥಾಪಿಸಬಾರದು. ಸುತ್ತಮುತ್ತ ಪ್ರದೇಶದಲ್ಲಿ ಮುಸಲ್ಮಾನರು ಇಲ್ಲಿ ನಮಾಜ್ ಮಾಡಲು ಬರುತ್ತಾರೆ. ಮಸೀದಿಯ ಎದುರು ಮಹಾರಾಣಾ ಪ್ರತಾಪ್ ಇವರ ಪುತ್ತಳಿ ಇದ್ದರೆ ಆಗ ದ್ವೇಷದ ಭಾವನೆ ನಿರ್ಮಾಣ ಆಗಬಹುದು; ಆದ್ದರಿಂದ ಈ ಪುತ್ತಳಿಯನ್ನು ಬೇರೆ ಕಡೆಗೆ ಎಲ್ಲಿಯಾದರೂ ಸ್ಥಾಪನೆ ಮಾಡಬಹುದು. ಪುತ್ತಳಿ ಸ್ಥಾಪನೆಗೆ ನಮ್ಮದು ಯಾವುದೇ ಆಕ್ಷೇಪವಿಲ್ಲ; ಆದರೆ ಭವಿಷ್ಯದಲ್ಲಿ ವಿವಾದ ನಿರ್ಮಾಣ ಆಗಬಾರದೆಂದು ಅದರ ಸ್ಥಾನ ಬದಲಾವಣೆ ಆಗಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮಹಾರಾಣಾ ಪ್ರತಾಪ್ ಇವರಿಂದ ದ್ವೇಷದ ಭಾವನೆ ಹೇಗೆ ನಿರ್ಮಾಣವಾಗಲು ಸಾಧ್ಯ ? ಅವರು ರಾಷ್ಟ್ರ ಪುರುಷರಾಗಿದ್ದರು ಮತ್ತು ಅವರು ಮೊಘಲರ ಜೊತೆಗೆ ಹೋರಾಡಿದ್ದರು. ಇದರಿಂದ ಪ್ರತಿಯೊಬ್ಬ ಭಾರತೀಯನು ಪ್ರೇರಣೆ ಪಡೆಯುವುದು ಅವಶ್ಯಕವಾಗಿರುವಾಗ ಮುಸಲ್ಮಾನರಿಗೆ ಹೀಗೆ ವಿಚಾರ ಏಕೆ ಬರುತ್ತದೆ ? ಅವರು ಭಾರತೀಯರೆ ಅಥವಾ ಮೊಘಲರ ವಂಶಜರೇ ? ಈಗ ಇದರ ಚರ್ಚೆ ನಡೆಯಬೇಕು !
  • ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮುಸಲ್ಮಾನರ ಮತಗಳಿಗಾಗಿ ಪುತ್ತಳಿ ಬೇರೆ ಸ್ಥಳದಲ್ಲಿ ಸ್ಥಾಪಿಸುವ ಸಾಧ್ಯತೆ ಇದೆ, ಇದನ್ನು ತಿಳಿದುಕೊಳ್ಳಿ ?