Lalu Yadav Calls Kumbh Useless : ‘ಕುಂಭಕ್ಕೆ ಅರ್ಥವಿಲ್ಲ, ಅದು ನಿಷ್ಪ್ರಯೋಜಕ ಅಂಶ!’ – ಲಾಲು ಪ್ರಸಾದ ಯಾದವ

ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಹಿಂದೂ ದ್ವೇಷ

ನವ ದೆಹಲಿ – ಕುಂಭಮೇಳಕ್ಕೆ ಯಾವುದೇ ಅರ್ಥವಿಲ್ಲ. ಅದು ನಿಷ್ಪ್ರಯೋಜಕವಾಗಿದೆ, ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು ಖೇದಕರ ಹೇಳಿಕೆ ನೀಡಿದರು. ದೆಹಲಿಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಕುರಿತು ಯಾದವ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಯಾದವ ಇವರು ಅಪಘಾತಕ್ಕೆ ರೈಲ್ವೆ ಇಲಾಖೆಯೇ ಕಾರಣ ಎಂದು ಆರೋಪಿಸಿದ್ದಾರೆ ಮತ್ತು ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಈ ಘಟನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಈ ಘಟನೆಯಲ್ಲಿ ಮೃತಪಟ್ಟ ಎಲ್ಲರಿಗೂ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇದು ರೈಲ್ವೆ ಇಲಾಖೆಯ ತಪ್ಪು, ರೈಲ್ವೆ ದುರುಪಯೋಗದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ತಾದವ ಹೇಳಿದರು.

ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಎಂದು ಅವರು 2004 ರಲ್ಲಿ ರೈಲ್ವೆ ಸಚಿವರಾಗಿದ್ದಾಗ ಛಠ್ ಪೂಜೆಯ ಸಮಯದಲ್ಲಿ ದೆಹಲಿ ರೈಲು ನಿಲ್ದಾಣದಲ್ಲಿ ಇದೇ ರೀತಿಯ ಕಾಲ್ತುಳಿತ ಸಂಭವಿಸಿದ ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ನೆನಪಿಸಿಕೊಡುತ್ತಿದ್ದಾರೆ.

ಸಂಪಾದಕೀಯ ನಿಲುವು

  • ದೆಹಲಿಯಲ್ಲಿನ ಕಾಲ್ತುಳಿತಕ್ಕೆ ರೈಲ್ವೆ ಸಚಿವರೇ ಕಾರಣ ಎಂಬ ಆರೋಪ !
  • ಭಾಜಪ ಅಧಿಕಾರದಲ್ಲಿರುವುದರಿಂದ ಲಾಲು ಪ್ರಸಾದ ಯಾದವ ಈ ರೀತಿ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ರೈಲ್ವೆ ಸಚಿವರಾಗಿ, ಈ ಘಟನೆಯು ಅವರಿಗೆ ಹಿಂದೂಗಳ ಮೇಲಿನ ದ್ವೇಷವನ್ನು ಹೊರಹಾಕಲು ಒಂದು ಅವಕಾಶ ಸಿಕ್ಕಿದೆ, ಅಷ್ಟೇ!
  • 50 ಕೋಟಿಗಿಂತಲೂ ಹೆಚ್ಚು ಹಿಂದೂಗಳು ಮಹಾಕುಂಭ ಮೇಳದ ಸಂಗಮ ಸ್ನಾನ ಮಾಡುವಂತಹ ಸ್ಥಳದಲ್ಲಿ ಇಂತಹ ಹೇಳಿಕೆಯು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿದು ಹಾಕಿದಂತೆಯಾಗಿದೆ. ಲಾಲು ಪ್ರಸಾದ ಯಾದವ ಮತ್ತು ಅವರ ಪಕ್ಷವನ್ನು ‘ನಿಷ್ಪ್ರಯೋಜಕ’ ಎಂದು ಪರಿಗಣಿಸಿ ಅವರ ರಾಜಕೀಯ ಅಸ್ತಿತ್ವವನ್ನು ಕೊನೆಗೊಳಿಸುವ ಜವಾಬ್ದಾರಿಯನ್ನು ಹಿಂದೂಗಳು ಈಗ ತೆಗೆದುಕೊಳ್ಳಬೇಕು !