ಗೊಂಡವಾನಾ ಪ್ರಜಾಪ್ರಭುತ್ವ ಪಕ್ಷದ ನಾಯಕ ಅಜಯ ಪ್ರತಾಪ ಸಿಂಹ ಇವರ ಆರೋಪ

ಸಿದ್ಧಿ (ಮಧ್ಯಪ್ರದೇಶ) – ಭಾಜಪದ ಮಾಜಿ ಶಾಸಕಾ ಮತ್ತು ಸಿದ್ಧಿ ಲೋಕಸಭಾ ಮತದಾರ ಕ್ಷೇತ್ರದಲ್ಲಿನ ಗೊಂಡವಾನ ಪ್ರಜಾಪ್ರಬುತ್ವ ಪಕ್ಷದ ನಾಯಕ ಅಜಯ ಪ್ರತಾಪ ಸಿಂಹ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಟೀಕಿಸಿರುವ ಒಂದು ವಿಡಿಯೋ ಫೇಸ್ ಬುಕ್ ನಲ್ಲಿ ಪ್ರಸಾರವಾಗಿದೆ. ಅವರು ಇದರಲ್ಲಿ ಪಂಡಿತ ಶಾಸ್ತ್ರಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಡೋಂಗಿತನವನ್ನು ಹಬ್ಬಿಸುವ ಮತ್ತು ಬ್ರಾಹ್ಮಣವಾದಕ್ಕೆ ಪ್ರೋತ್ಸಾಹ ನೀಡುವ ಆರೋಪ ಹೊರಸಿದ್ದಾರೆ.
ಈ ವಿಡಿಯೋದಲ್ಲಿ ಸಿಂಹ ಇವರು,
೧. ಮಧ್ಯಪ್ರದೇಶದಲ್ಲಿನ ಛತರಪುರ ಜಿಲ್ಲೆಯಲ್ಲಿ ಬಾಗೇಶ್ವರ ಧಾಮದಲ್ಲಿ ಓರ್ವ ಡೋಂಗಿ ಬಾಗೇಶ್ವರ ಮಹಾರಾಜ್ ಉಪಸ್ಥಿತರಿದ್ದಾರೆ. ಜಗತ್ತು ಅವರ ಸಲ್ಲದ ಪವಾಡ ಮತ್ತು ಡೋಂಗಿತನವನ್ನು ಪ್ರತಿದಿನ ನೋಡುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕುರಿತು ಮಾತನಾಡುವವರು ಇದೇ ಮಹಾರಾಜರಾಗಿದ್ದಾರೆ. ಹಿಂದೂ ರಾಷ್ಟ್ರವೆಂದರೆ ಚಮ್ಮಾರರು, ಕುಂಬಾರರು, ಗೊಂಡ, ಕೊಳ, ಪಣಿಕಾ ಎಲ್ಲಾ ಹಿಂದುಳಿದ ಜಾತಿ, ಜನಾಂಗ ಮತ್ತು ಆದಿವಾಸಿ ಜನಾಂಗ ಇಲ್ಲಿ ವಾಸಿಸುವರು ಮತ್ತು ಅವರ ಜೊತೆಗೆ ಯಾವ ರೀತಿಯ ಅಸ್ಪೃಶ್ಯತೆಯ ಭೇದಭಾವ ನಡೆಯುವುದು ಮತ್ತು ಬ್ರಾಹ್ಮಣ ಧರ್ಮದ ಅಧಿಕಾರ ಉಳಿಯುವುದು.
೨. ನಾನು ಗೊಂಡವಾನಾ ಪ್ರಜಾಪ್ರಭುತ್ವ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಮತ್ತು ಬೆಂಬಲರಿಗೆ ವಿನಂತಿಸುತ್ತಾ ಅವರು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಈ ದೇಶದಲ್ಲಿ ಬ್ರಾಹ್ಮಣವಾದ ಹೇರಲು ಇಚ್ಚಿಸುವ ಮಹಾರಾಜರನ್ನು ತೀವ್ರವಾಗಿ ನಿಷೇಧಿಸಬೇಕು ಮತ್ತು ಅವರನ್ನು ಸಾರ್ವಜನಿಕವಾಗಿ ಬಹಿಷ್ಕರಿಸಬೇಕು’, ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ