ಗೊಂಡವಾನಾ ಪ್ರಜಾಪ್ರಭುತ್ವ ಪಕ್ಷದ ನಾಯಕ ಅಜಯ ಪ್ರತಾಪ ಸಿಂಹ ಇವರ ಆರೋಪ

ಸಿದ್ಧಿ (ಮಧ್ಯಪ್ರದೇಶ) – ಭಾಜಪದ ಮಾಜಿ ಶಾಸಕಾ ಮತ್ತು ಸಿದ್ಧಿ ಲೋಕಸಭಾ ಮತದಾರ ಕ್ಷೇತ್ರದಲ್ಲಿನ ಗೊಂಡವಾನ ಪ್ರಜಾಪ್ರಬುತ್ವ ಪಕ್ಷದ ನಾಯಕ ಅಜಯ ಪ್ರತಾಪ ಸಿಂಹ ಇವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರನ್ನು ಟೀಕಿಸಿರುವ ಒಂದು ವಿಡಿಯೋ ಫೇಸ್ ಬುಕ್ ನಲ್ಲಿ ಪ್ರಸಾರವಾಗಿದೆ. ಅವರು ಇದರಲ್ಲಿ ಪಂಡಿತ ಶಾಸ್ತ್ರಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಡೋಂಗಿತನವನ್ನು ಹಬ್ಬಿಸುವ ಮತ್ತು ಬ್ರಾಹ್ಮಣವಾದಕ್ಕೆ ಪ್ರೋತ್ಸಾಹ ನೀಡುವ ಆರೋಪ ಹೊರಸಿದ್ದಾರೆ.
ಈ ವಿಡಿಯೋದಲ್ಲಿ ಸಿಂಹ ಇವರು,
೧. ಮಧ್ಯಪ್ರದೇಶದಲ್ಲಿನ ಛತರಪುರ ಜಿಲ್ಲೆಯಲ್ಲಿ ಬಾಗೇಶ್ವರ ಧಾಮದಲ್ಲಿ ಓರ್ವ ಡೋಂಗಿ ಬಾಗೇಶ್ವರ ಮಹಾರಾಜ್ ಉಪಸ್ಥಿತರಿದ್ದಾರೆ. ಜಗತ್ತು ಅವರ ಸಲ್ಲದ ಪವಾಡ ಮತ್ತು ಡೋಂಗಿತನವನ್ನು ಪ್ರತಿದಿನ ನೋಡುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕುರಿತು ಮಾತನಾಡುವವರು ಇದೇ ಮಹಾರಾಜರಾಗಿದ್ದಾರೆ. ಹಿಂದೂ ರಾಷ್ಟ್ರವೆಂದರೆ ಚಮ್ಮಾರರು, ಕುಂಬಾರರು, ಗೊಂಡ, ಕೊಳ, ಪಣಿಕಾ ಎಲ್ಲಾ ಹಿಂದುಳಿದ ಜಾತಿ, ಜನಾಂಗ ಮತ್ತು ಆದಿವಾಸಿ ಜನಾಂಗ ಇಲ್ಲಿ ವಾಸಿಸುವರು ಮತ್ತು ಅವರ ಜೊತೆಗೆ ಯಾವ ರೀತಿಯ ಅಸ್ಪೃಶ್ಯತೆಯ ಭೇದಭಾವ ನಡೆಯುವುದು ಮತ್ತು ಬ್ರಾಹ್ಮಣ ಧರ್ಮದ ಅಧಿಕಾರ ಉಳಿಯುವುದು.
೨. ನಾನು ಗೊಂಡವಾನಾ ಪ್ರಜಾಪ್ರಭುತ್ವ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಮತ್ತು ಬೆಂಬಲರಿಗೆ ವಿನಂತಿಸುತ್ತಾ ಅವರು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಈ ದೇಶದಲ್ಲಿ ಬ್ರಾಹ್ಮಣವಾದ ಹೇರಲು ಇಚ್ಚಿಸುವ ಮಹಾರಾಜರನ್ನು ತೀವ್ರವಾಗಿ ನಿಷೇಧಿಸಬೇಕು ಮತ್ತು ಅವರನ್ನು ಸಾರ್ವಜನಿಕವಾಗಿ ಬಹಿಷ್ಕರಿಸಬೇಕು’, ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein