ಸರ್ವೋಚ್ಚ ನ್ಯಾಯಾಲಯವು ಉರುಸ್ ಗೆ ಅನುಮತಿ ನಿರಾಕರಣೆ
(ಉರುಸ ಎಂದರೆ ಮುಸ್ಲಿಂ ಧರ್ಮಗುರುವಿನ ಪುಣ್ಯತಿಥಿಯ ನಿಮಿತ್ತ ಆಯೋಜಿಸಿರುವ ಉತ್ಸವವಾಗಿದೆ.)
ನವದೆಹಲಿ – ಗುಜರಾತನ ಸೋಮನಾಥ ಜಿಲ್ಲೆಯಲ್ಲಿ ಕೆಡವಲಾದ ಒಂದು ದರ್ಗಾದಲ್ಲಿ ‘ಉರುಸ್’ ಆಯೋಜಿಸಲು ಅನುಮತಿ ಕೋರಿದ್ದರು. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿ ಈ ಅರ್ಜಿಯನ್ನು ತಿರಸ್ಕರಿಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರಕಾರಿ ಭೂಮಿಯಲ್ಲಿ ದೇವಸ್ಥಾನಗಳು ಸೇರಿದಂತೆ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ತೆಗೆದುಹಾಕಲಾಗಿದೆ. ಇಂತಹ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಈ ಹಿಂದೆ ಅತಿಕ್ರಮಣಗೊಂಡಿರುವ ಭೂಮಿಯಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.
No event to be organised around the encroached demolished D@rgah in the Somnath district of Gujarat!
Permission for Urs denied by the Supreme Court
How dare they go to the Supreme Court after asking for permission to celebrate Urs on the encroached demolished d@rgah ? This is… pic.twitter.com/bEBsOcbT9V
— Sanatan Prabhat (@SanatanPrabhat) February 1, 2025
ಕಳೆದ ವರ್ಷ ಸೆಪ್ಟೆಂಬರ್ 28 ರಂದು, ಸೋಮನಾಥ ದೇವಾಲಯದ ಬಳಿಯ ಸಾರ್ವಜನಿಕ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಅಭಿಯಾನವನ್ನು ಪ್ರಾರಂಭಿಸಲಾಗಿತ್ತು.
ಸಂಪಾದಕೀಯ ನಿಲುವುಅತಿಕ್ರಮಣಗೊಂಡ ದರ್ಗಾವನ್ನು ಕೆಡವಿದ ನಂತರವೂ ಅಲ್ಲಿ ಉರುಸ್ ಆಚರಿಸಲು ಅನುಮತಿ ಪಡೆಯುವುದು ಕಾನೂನು ಉಲ್ಲಂಘನೆಯ ತುತ್ತತುದಿ ಎಂದು ಹೇಳಬಹುದು. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ವರೆಗೆ ಹೋಗಲು ಇಷ್ಟು ಧೈರ್ಯ ಬರುತ್ತಾದರೂ ಹೇಗೆ ? ಇಂತಹವರಿಗೆ ನ್ಯಾಯಾಲಯವು ಕಠಿಣವಾಗಿ ಶಿಕ್ಷಿಸಬೇಕು ಮತ್ತು ಹೆದರಿಕೆ ಮೂಡಬೇಕು ಎಂದೇ ಜನರಿಗೆ ಅನಿಸುತ್ತದೆ ! |