ಮಹಿಳೆಯರ ಅಪಮಾನ ಮತ್ತು ಶವದ ಅಂಗಾಂಗಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಇಬ್ಬರಿಗೆ ಸಮನ್ಸ್ !

ಮುಂಬಯಿ – ಸ್ಟ್ಯಾಂಡ್ಅಪ್ ಕಾಮೆಡಿಯನ್ ಪ್ರಣೀತ್ ಮೋರೆ ಅವರ ಕಾರ್ಯಕ್ರಮದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರಲ್ಲಿ ಹಿಮಾಂಶು ಜಾಂಗ್ರಾ ಎಂಬ ಯುವಕ, “ನಾನು ಒಬ್ಬ ಯುವತಿಯೊಂದಿಗೆ ಹೊರಗೆ ಹೋಗಿದ್ದೆ. ಅಲ್ಲಿ ನಾನು ಚಿಕನ್ ಬಿರಿಯಾನಿಗಾಗಿ 370 ರೂಪಾಯಿ ಖರ್ಚು ಮಾಡಿದೆ. ನಂತರ ಆ ಹಣವನ್ನು ನಾನು ವಸೂಲಿ ಮಾಡಲಿದ್ದೇನೆ” ಎಂದು ಹೇಳಿದ್ದನು. ಯುವಕನು ದ್ವಂದ್ವಾರ್ಥದ ಹೇಳಿಕೆ ನೀಡಿ ಮಹಿಳೆಯರನ್ನು ಅಪಮಾನಿಸಿದ್ದನು. ಇದಕ್ಕೆ ಪ್ರಣೀತ್ ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಜನರು ನಕ್ಕಿದ್ದರು. ಮತ್ತೊಂದು ವಿಡಿಯೋದಲ್ಲಿ ಡಾ. ಸೇಜಲ ಪವಾರ್ ಎಂಬಾಕೆ ಪುರುಷ ರೋಗಿಯ ಮರಣದ ನಂತರ ಅವರ ಶವದ ಅಂಗಾಂಗದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಳು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಣೀತ್ ಮೋರೆ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಣೀತ್ ಮೋರೆ, ಹಿಮಾಂಶು ಜಾಂಗ್ರಾ ಮತ್ತು ಡಾ. ಸೇಜಲ್ ಪವಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
Watch video report
pic.twitter.com/IooPiPpe8FPranit More l Himanshu Jangra l Dr Sejal Pawar #370BiryaniControversy #MaharashtraCyberPolice
— Sanatan Prabhat (@SanatanPrabhat) June 12, 2026
ಎಲ್ಲೆಡೆಯಿಂದ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಡಾ. ಸೇಜಲ ಪವಾರ್ ಕ್ಷಮೆಯಾಚಿಸಿದ್ದಾರೆ. (ರೋಗಿಯ ಶವದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಇಂತಹ ಆಧುನಿಕ ವೈದ್ಯರ ಪರವಾನಗಿಯನ್ನೇ ಶಾಶ್ವತವಾಗಿ ರದ್ದುಗೊಳಿಸಬೇಕು! – ಸಂಪಾದಕರು)
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ
ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಸಲ್ಮಾನ್ ಖಾನ್ ಅವರಿಂದ ಪರಿಸರ ನಿಯಮಗಳ ಉಲ್ಲಂಘನೆ! – ವಿಡಿಯೋ ಮೂಲಕ ನೆರೆಹೊರೆಯವರ ಆರೋಪ