ಹಿಂದೂ ಜನಜಾಗೃತಿ ಸಮಿತಿಯ ಅರ್ಜಿಯ ಕುರಿತು ನಿರ್ಧಾರ
ಸಂಭಾಜಿನಗರ – ಶ್ರೀ ತುಳಜಾಭವಾನಿ ದೇವಿಗೆ ಸೇರಿದ 207 ಕೆಜಿ ಚಿನ್ನ ಮತ್ತು 2 ಸಾವಿರದ 570 ಕೆಜಿ ಬೆಳ್ಳಿಯನ್ನು ಕರಗಿಸಲು ಅನುಮತಿ ಕೋರಿ ಧಾರಾಶಿವ ಜಿಲ್ಲಾಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬಯಿ ಹೈಕೋರ್ಟ್ನ ಸಂಭಾಜಿನಗರ ಪೀಠವು ಜನವರಿ 23 ರಂದು ತಿರಸ್ಕರಿಸಿದೆ ಎಂದು ಪ್ರಕರಣದ ವಿರುದ್ಧ ಹೋರಾಡುತ್ತಿರುವ ವಕೀಲ ಉಮೇಶ್ ಭಡಗಾವಕರ ಇವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಮಂಗೇಶ ಪಾಟೀಲ ಮತ್ತು ನ್ಯಾಯಮೂರ್ತಿ ಶೈಲೇಶ ಬ್ರಹ್ಮೆ ಅವರು ಈ ಆದೇಶವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ, ಶ್ರೀ ತುಳಜಾ ಭವಾನಿ ದೇವಾಲಯ ಸಂಸ್ಥಾನಕ್ಕೆ ‘ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು’ ಸೂಚಿಸಿದೆ. ದೇವಾಲಯದಲ್ಲಿರುವ ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸುವ ನಿರ್ಧಾರವನ್ನು ವಿರೋಧಿಸಿ ಕೆಲವು ಅರ್ಚಕರು ಮತ್ತು ಹಿಂದೂ ಜನಜಾಗೃತಿ ಸಮಿತಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
The Bombay High Court rejects the demands of the Dharashiv District Officer to melt all the gold and silver available in the vault of Shri Tulja Bhavanidevi!
This Decision was taken after a writ petition was submitted by the Hindu Janajagruti Samiti
The Samiti however has… pic.twitter.com/2Kc1xqcK4u
— Sanatan Prabhat (@SanatanPrabhat) January 24, 2025