ಕೊಟ್ಟಿಗೆಯಲ್ಲಿ ಉಳಿದರೆ ಕ್ಯಾನ್ಸರ್ ವಾಸಿಯಾಗಬಹುದು! – ಉತ್ತರ ಪ್ರದೇಶ ಸರಕಾರದ ರಾಜ್ಯ ಸಚಿವ ಸಂಜಯ ಗಂಗವಾರ

ಉತ್ತರ ಪ್ರದೇಶ ಸರಕಾರದ ರಾಜ್ಯ ಸಚಿವ ಸಂಜಯ ಗಂಗವಾರ ಇವರ ದಾವೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನಿನ ಮೇಲೆ ಕೈಯಾಡಿಸಿದರೆ ರಕ್ತದೊತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ. 10 ದಿನ ಹಸುವಿನ ಸೇವೆ ಮಾಡಿದರೆ ಒಟ್ಟು 20 ಮಿಲಿಗ್ರಾಂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅವರು 10 ಮಿಲಿಗ್ರಾಂನಷ್ಟು ತೆಗೆದುಕೊಳ್ಳ ಬೇಕಾಗುವುದು. ನೀವು ಕ್ಯಾನ್ಸರ್ ರೋಗಿಯಾಗಿದ್ದರೆ, ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ. ಅಲ್ಲಿಯೇ ಉಳಿದರೆ ಕ್ಯಾನ್ಸರ್ ಕೂಡ ವಾಸಿಯಾಗಬಹುದು. ಇದು ಸಂಪೂರ್ಣ ಪರೀಕ್ಷಿಸಿದ ವಿಷಯವಾಗಿದೆ, ನಾನು ನಿಮಗೆ ಹೇಳುತ್ತಿದ್ದೇನೆ ಎಂದು ಉತ್ತರ ಪ್ರದೇಶ ಸರಕಾರದ ರಾಜ್ಯಸಚಿವ ಸಂಜಯ ಗಂಗವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

ಗಂಗವಾರ್ ಜನರಲ್ಲಿ ಮನವಿ ಮಾಡುವಾಗ, ಗೋವಿನ ಸೇವೆಯೇ ಎಲ್ಲಕ್ಕಿಂತ ಶ್ರೇಷ್ಠಸೇವೆ ಇದೆ. ಜನರು ಕೊಟ್ಟಿಗೆಯಲ್ಲಿರುವ ಗೋವುಗಳಿಗಾಗಿ ದಾನ ಮಾಡಬೇಕು. ನಿಮ್ಮ ಮಕ್ಕಳ ಜನ್ಮದಿನಗಳನ್ನು ಕೊಟ್ಟಿಗೆಯಲ್ಲಿ ಆಚರಿಸಿ. ಇದರಿಂದ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.