ನಾಗಮಂಗಲ ಗಲಭೆಗೆ ಹಿಂದೂಗಳೇ ಹೊಣೆ ! – ಸಚಿವ ಜಮೀರ್ ಅಹಮದ

ಬೆಂಗಳೂರು : ನಾಗಮಂಗಲದಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ಧಾರ್ಮಿಕ ಗಲಭೆಗೆ ಹಿಂದೂಗಳೇ ಕಾರಣ ಎಂದು ಸಚಿವ ಜಮೀರ್ ಅಹಮದ ಆರೋಪಿಸಿದ್ದಾರೆ. ಅವರು, “ಮೆರವಣಿಗೆಯು ದರ್ಗಾದ ಮುಂದಿನಿಂದ ಹಾದುಹೋಗುವ ಸಮಯದಲ್ಲಿ ನಮಾಜ್‌ನ ಸಮಯವಾದ್ದರಿಂದ 10 ನಿಮಿಷಗಳ ಕಾಲ ಅವರಿಗೆ(ಹಿಂದೂಗಳಿಗೆ) ನಿಲ್ಲಿಸಲು ಕೇಳಲಾಯಿತು; ಆದರೆ ಇದನ್ನು ಒಪ್ಪದ ಕಾರಣ ಗಲಾಟೆ ನಡೆದಿದೆ. ರಾಜಕೀಯ ನಾಯಕರ ಹೇಳಿಕೆಗಳಿಂದಾಗಿ ಈ ವಿಷಯ ಕಾವೇರಿದೆ. ‘ಗಲಭೆ ಆಗಬೇಕು ಎಂದು ನಾನು ಹೇಳಿರಲಿಲ್ಲ. ಇಂತಹ ಗಲಭೆಗಳು ನಡೆಯಬಾರದು ಎಂದು ನಾವೆಲ್ಲರೂ ಪ್ರಯತ್ನಿಸಬೇಕು. ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಗಲಭೆಗಳು ನಡೆಯುತ್ತವೆ’ ಎಂದು ಹೇಳುವುದು ತಪ್ಪು. ಭಾಜಪ ಇದ್ದಾಗ ಗಲಭೆಗಳಾಗಲಿಲ್ಲವೇ ?” ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ಹಿಂದೂಗಳ ವಿರುದ್ಧ ಹೇಗೆ ಸಂಚು ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ, ಇಂತಹ ಮತಾಂಧ ಸಚಿವ ಅಧಿಕಾರದಲ್ಲಿದ್ದರೆ ಆ ರಾಜ್ಯದ ಹಿಂದೂಗಳು ಸುರಕ್ಷಿತವಾಗಿರುತ್ತಾರಾ ? ಹಿಂದೂಗಳು ಈ ಸಚಿವರನ್ನು ನ್ಯಾಯೋಚಿತವಾಗಿ ಖಂಡಿಸಬೇಕು !