ಜಾಗತಿಕ ತಾಪಾಮಾನದ ಹೆಚ್ಚಳ ಅಥವಾ ಹಿಮಾಲಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಿಕಾಸ ಕಾರ್ಯಗಳೇ ಇದಕ್ಕೆ ಕಾರಣ ಎಂದು ಆರೋಪ !

ಡೆಹರಾಡೂನ್ (ಉತ್ತರಾಖಂಡ) – ರಾಜ್ಯದಲ್ಲಿನ ಪಿಥೋರಾಗಡ್ ನ ಧಾರಚುಲಾ ತಾಲೂಕಿನಲ್ಲಿರುವ ವ್ಯಾಸ ಕಣಿವೆಯಲ್ಲಿ ಓಂ ಪರ್ವತವಿದೆ. ೫, ೯೦೦ ಮೀಟರ್ ಎತ್ತರದ ಈ ಪರ್ವತದ ವೈಶಿಷ್ಟ್ಯವೆಂದರೆ, ಈ ಪರ್ವತದ ಮೇಲೆ ‘ಓಂ’ ಅಕ್ಷರದ ಮನಮೋಹಕ ಆಕೃತಿ ಕಾಣುತ್ತದೆ. ಕಳೆದ ಸಾವಿರಾರು ವರ್ಷಗಳಿಂದ ಈ ಪರ್ವತವಿದೆ ಎಂದು ನಂಬಲಾಗಿದೆ. ಶ್ವೇತ ಹಿಮದಿಂದ ಕೂಡಿರುವ ಪರ್ವತದಲ್ಲಿನ ಈ ಓಂ ಚಿಹ್ನೆ ಕೋಟ್ಯಾಂತರ ಹಿಂದುಗಳ ಶ್ರದ್ಧೆಯ ಕೇಂದ್ರವಾಗಿದ್ದು ಈ ಬಾರಿ ಜಾಗತಿಕ ತಾಪಮಾನ ಹೆಚ್ಚಿರುವುದರಿಂದ ಪರ್ವತದ ಮೇಲಿನ ಹಿಮ ಹೆಚ್ಚು ಪ್ರಮಾಣದಲ್ಲಿ ಕರಗಿರುವುದರಿಂದ ಓಂ ಆಕೃತಿ ಕಣ್ಮರೆಯಾಗಿದೆ.
೧. ಪರಿಸರವಾದಿಗಳು ಮತ್ತು ಸ್ಥಳೀಯರ ಪ್ರಕಾರ ನೈಸರ್ಗಿಕ ಕಾರಣದಿಂದಾಗಿ ಈ ಬದಲಾವಣೆ ಆಗಿದೆ. ಹಿಮಾಲಯದ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಕಾಸ ಕಾರ್ಯಗಳಿಂದಾಗಿ ಈ ರೀತಿ ಆಗಿದೆ. ಕೆಲ ಸ್ಥಳೀಯರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಮಾಡಿದ್ದಾರೆ.
೨. ಈ ಘಟನೆಯ ವಿಚಾರಣೆ ನಡೆಸುವಂತೆ ಶ್ರದ್ಧಾಳುಗಳು ಆಗ್ರಹಿಸಿದ್ದಾರೆ. ಸರಕಾರವು ಈ ಘಟನೆಯ ವಿಚಾರಣೆ ನಡೆಸುತ್ತಿದೆ. ಪರ್ವತದ ಮೇಲೆ ಮತ್ತೆ ಓಂ ಮೂಡುವಂತೆ ಗಮನ ಹರಿಸಲಾಗುತ್ತಿದೆ.
೩. ಹೊಸ ಋತುವಿನಲ್ಲಿ ಮತ್ತೆ ಹಿಮ ಬಿದ್ದು ಪರ್ವತದ ಮೇಲೆ ‘ಓಂ’ ಮೂಡುವುದೆಂದು ಅಲ್ಲಿನ ಜನರ ವಿಶ್ವಾಸವಾಗಿದೆ.
೪. ಕೈಲಾಸ ಮಾನಸ ಸರೋವರದ ಯಾತ್ರೆಯ ವೇಳೆ ನಾಭಿಢಾಂಗದಿಂದ ಈ ಪರ್ವತ ಭಕ್ತರಿಗೆ ತನ್ನ ದರ್ಶನ ನೀಡುತ್ತದೆ.
ಸಂಪಾದಕೀಯ ನಿಲುವುಈ ಎರಡೂ ಆರೋಪಗಳು ಸತ್ಯವಾಗಿರಬಹುದು. ಯಾಕೆಂದರೆ ಈ ಎರಡು ಆರೋಪಗಳಲ್ಲಿ ಮನುಷ್ಯನ ಹಸ್ತಕ್ಷೇಪವೇ ಇದಕ್ಕೆ ಕಾರಣ ಎಂಬುದು ತಿಳಿಯುತ್ತದೆ. ಸಂಕ್ಷಿಪ್ತವಾಗಿ, ವೈಜ್ಞಾನಿಕ ವಿಕಾಸದಿಂದ ಹಿಂದೂ ಧರ್ಮದ ಅಂದರೆ ಮನುಷ್ಯನ ಹಾನಿ ಹೇಗಾಗುತ್ತದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!