ರಾಷ್ಟ್ರವಾದಿ ಜನರು ಅರಾಜಕತೆಯನ್ನು ಹರಡಲು ಪ್ರಯತ್ನಿಸುವವರ ಮೇಲೆ ಅಂಕುಶವಿಡಬೇಕು ! – ಮಹಂತ ರಾಮಗಿರಿ ಮಹಾರಾಜ

  • ಮಹಂತ ರಾಮಗಿರಿ ಮಹಾರಾಜರು ಪ್ರವಾದಿ ಮಹಮ್ಮದರ ಬಗ್ಗೆ ಮಾತನಾಡಿದ ಪ್ರಕರಣ

  • ಸಮಾಜದಲ್ಲಿ ದ್ವೇಷವನ್ನು ಹರಡುವಂತಹ ಹೇಳಿಕೆ ನೀಡಿಲ್ಲವೆಂದು ಹೇಳಿಕೆ

ನಾಸಿಕ – ನಾನು ಸಮಾಜದಲ್ಲಿ ದ್ವೇಷ ನಿರ್ಮಾಣವಾಗುವಂತಹ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಪ್ರವಚನದ ಕೆಲವು ಭಾಗಗಳನ್ನು ಮಾತ್ರ ‘ಎಡಿಟ್’ ಮಾಡಿ ತೋರಿಸಲಾಗಿದೆ. ನನಗೆ ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ನಂಬಿಕೆ ಇದೆ. ಹಿಂದೂಗಳು ಅವರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತರಾಗಬೇಕು. ರಾಷ್ಟ್ರವಾದಿ ಜನರು ಅರಾಜಕತೆ ಸೃಷ್ಟಿಸಲು ನೋಡುವವರ ಮೇಲೆ ಕಡಿವಾಣ ಹಾಕಬೇಕು. ಎಲ್ಲ ಸಮಾಜಗಳು ಶಾಂತಿ ಕಾಪಾಡಬೇಕು. ಆಂದೋಲನ ಅಥವಾ ಕಲ್ಲು ತೂರಾಟ ಸೂಕ್ತವಲ್ಲ. ನಾವು ಶಾಂತಿಪ್ರಿಯರಾಗಿದ್ದೇವೆ. ದೌರ್ಜನ್ಯವನ್ನು ಸಹಿಸಬಾರದು ಇದು ನಮ್ಮ ಉದ್ದೇಶವಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಮಹಾಂತ ರಾಮಗಿರಿ ಮಹಾರಾಜರು ಹೇಳಿದ್ದಾರೆ.