ಯೋಗಋಷಿ ರಾಮದೇವ್ ಬಾಬಾ ಇವರ ಸ್ಪಷ್ಟೋಕ್ತಿ !

ಹರಿದ್ವಾರ (ಉತ್ತರಾಖಂಡ) – ಬಾಂಗ್ಲಾದೇಶದಲ್ಲಿ ಹಿಂಸಾಚಾರ ಉತ್ತುಂಗಕ್ಕೇರಿದೆ. ಜಮಾತ-ಎ-ಇಸ್ಲಾಮಿ ಮತ್ತು ಎಲ್ಲಾ ಕಟ್ಟರವಾದಿ ಶಕ್ತಿಗಳು ತಮ್ಮ ಕ್ರೌರ್ಯವನ್ನು ತೋರಿಸುತ್ತಿವೆ. ಇಂತಹ ಘಟನೆ ಮರುಕಳಿಸಬಾರದು. ಅದನ್ನು ಸಹಿಸುವುದಿಲ್ಲ. ನಾವು ಬಾಂಗ್ಲಾದೇಶವನ್ನು ರಚಿಸಬಹುದಾದರೆ, ನಮ್ಮ ಹಿಂದೂ ಸಹೋದರರನ್ನು ರಕ್ಷಿಸಲು ನಾವು ಮಧ್ಯಪ್ರವೇಶಿಸಬಹುದು ಎಂದು ಯೋಗಋಷಿ ರಾಮದೇವ್ ಬಾಬಾ ಹೇಳಿದ್ದಾರೆ.
ಜಗತ್ತಿಗೆ ಹಿಂದೂಗಳು ತಮ್ಮ ಶಕ್ತಿ ತೋರಿಸಬೇಕಾಗಿದೆ !
ರಾಮದೇವ್ ಬಾಬಾ ತಮ್ಮ ಮಾತನ್ನು ಮುಂದುವರೆಸುತ್ತಾ, ಬಾಂಗ್ಲಾದೇಶದಲ್ಲಿರುವ ನಮ್ಮ ಹಿಂದೂ ಸಹೋದರರ ವಿರುದ್ಧ ಯಾವುದೇ ಅತ್ಯಾಚಾರ, ಉಗ್ರವಾದ ಅಥವಾ ಅನ್ಯಾಯವಾಗದಂತೆ ನೋಡಿಕೊಳ್ಳಲು ಇಡೀ ದೇಶವು ಒಗ್ಗಟ್ಟಾಗಿರಬೇಕು ಎಂದು ಹೇಳಿದರು. ಇಸ್ಲಾಮಿಕ್ ಕಟ್ಟರವಾದವು ಜಗತ್ತಿನಲ್ಲಿ ಬೆಳೆಯುತ್ತಿರುವ ರೀತಿ ಮತ್ತು ಈಗ ಅದು ಭಾರತದ ನೆರೆಹೊರೆಯವರ ಬಾಗಿಲನ್ನು ತಟ್ಟಿದೆ, ಇದು ನಮ್ಮ ದೇಶಕ್ಕೆ ತುಂಬಾ ಅಪಾಯಕಾರಿಯಾಗಬಹುದು. ಹಿಂದೂ ಹೆಣ್ಣುಮಕ್ಕಳ ಗೌರವದ ಪ್ರಶ್ನೆಯಾಗಿದೆ. ಇಸ್ಲಾಮಿಕ್ ಕಟ್ಟರವಾದಿಗಳು ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಮಾಡುತ್ತಿರುವುದು ತಪ್ಪು. ನಾವು ಭಾರತದಲ್ಲಿ ಒಂದಾಗಿ ಹಿಂದೂಗಳ ಶಕ್ತಿಯನ್ನು ಜಗತ್ತಿಗೆ ತೋರಿಸಬೇಕು. ಕೆಲವು ರಾಜಕಾರಣಿಗಳು, ಸಾಮಾಜಿಕ ಮತ್ತು ಧಾರ್ಮಿಕ ಭಯೋತ್ಪಾದಕರು ಇಸ್ಲಾಮಿಕ್ ಕಟ್ಟರವಾದದ ಪರವಾಗಿ ಮಾತನಾಡುತ್ತಿದ್ದಾರೆ. ಅವರು ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ಬಯಸುತ್ತಾರೆ. ಅಂತಹವರನ್ನೂ ತಡೆಯಬೇಕು ಎಂದು ಹೇಳಿದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!