ಭಾರತದಲ್ಲಿ ಹಿಂದೂ ರಾಷ್ಟ್ರ ಏಕೆ ಬೇಕು, ಎಂದು ಪ್ರಶ್ನಿಸುವವರಿಗೆ ಉತ್ತರ ಸಿಕ್ಕಿರಬಹುದು ! – ಸಾಂಸದೆ ಕಂಗನಾ ರಾಣಾವತ

ಹಸೀನಾ ಇವರಿಗೆ ಭಾರತದಲ್ಲಿ ಆಶ್ರಯ ನೀಡಿರುವ ಪ್ರಕರಣ

ನವ ದೆಹಲಿ – ಭಾಜಪದ ಸಾಂಸದೆ ಕಂಗನಾ ರಾಣಾವತ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ ಬಾಂಗ್ಲಾದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಅವರು, ‘ನಮ್ಮ ಸುತ್ತಲೂ ಇರುವ ಎಲ್ಲಾ ಇಸ್ಲಾಮಿ ರಿಪಬ್ಲಿಕ್‌ದೇಶದ ಮಾತೃಭೂಮಿ ಭಾರತವಾಗಿದೆ. ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ ಹಸೀನಾ ಇವರಿಗೆ ಭಾರತವು ಸುರಕ್ಷಿತ ಅನಿಸುತ್ತದೆ, ನಮಗೆ ಇದರ ಅಭಿಮಾನ ಇದೆ; ಆದರೆ ಯಾರೂ ಭಾರತದಲ್ಲಿ ವಾಸಿಸುತ್ತಾ ಹಿಂದೂ ರಾಷ್ಟ್ರ ಏಕೆ ? ರಾಮರಾಜ್ಯ ಏಕೆ ಬೇಕು ? ಎಂದು ಕೇಳುತ್ತಾರೆಯೋ ಅವರಿಗೆ ಇದರ ಉತ್ತರ ಸಿಕ್ಕಿರಬಹುದು. ಇಸ್ಲಾಮಿ ದೇಶದಲ್ಲಿ ಮುಸಲ್ಮಾನರು ಕೂಡ ಸುರಕ್ಷಿತವಾಗಿಲ್ಲ. ಅಪಘಾನಿಸ್ತಾನ್, ಬಾಂಗ್ಲಾದೇಶ, ಪಾಕಿಸ್ತಾನ್ ಮತ್ತು ಬ್ರಿಟನ್ ನಲ್ಲಿ ಏನೆಲ್ಲಾ ನಡೆಯುತ್ತಿದೆ, ಅದು ದುರಾದೃಷ್ಟಕರವಾಗಿದೆ. ನಾವು ಭಾಗ್ಯಶಾಲಿಗಳಾಗಿದ್ದೇವೆ ಏಕೆಂದರೆ, ನಾವು ರಾಮರಾಜ್ಯದಲ್ಲಿ ವಾಸಿಸುತ್ತಿದ್ದೇವೆ, ಎಂದು ಹೇಳಿದರು.