ಸಮಾಜವಾದಿ ಪಕ್ಷದ ಮೋಯಿದ ಖಾನ್ ನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಎರಡು ತಿಂಗಳಿಂದ ಬಲಾತ್ಕಾರ !

  • ಅಯೋಧ್ಯೆಯಲ್ಲಿನ (ಉತ್ತರಪ್ರದೇಶ) ಘಟನೆ !

  • ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರಿಗೆ ಅನುಕಂಪ ಇಲ್ಲ ! – ಯೋಗಿ ಆದಿತ್ಯನಾಥ

  • ಖಾನ್ ಮತ್ತು ಅವನ ನೌಕರನ ಬಂಧನ !

  • ಖಾನ್ ಸಮಾಜವಾದಿ ಪಕ್ಷದ ಸ್ಥಳೀಯ ಶಾಸಕ ಅವಧೇಶ ಪ್ರಸಾದ್ ಇವರ ಆಪ್ತ !

ಅಯೋಧ್ಯೆ (ಉತ್ತರಪ್ರದೇಶ) – ಜಿಲ್ಲೆಯಲ್ಲಿನ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಮಾಜವಾದಿ ಪಕ್ಷದ ನಾಯಕ ಮೋಯಿದ ಖಾನ್ ಮತ್ತು ಅವನ ಆಳು ರಾಜು ಖಾನ್ ಮೇಲೆ ಬಲಾತ್ಕಾರದ ಆರೋಪವಿದೆ. ಹಿಂದುಳಿದ ವರ್ಗದ ಅಪ್ರಾಪ್ತ ಹಿಂದೂ ಸಂತ್ರಸ್ತೆಯ ಅಶ್ಲೀಲ ವಿಡಿಯೋ ಮಾಡಿ ಆಕೆಯನ್ನು ಬ್ಲಾಕಮೇಲ್ ಕೂಡ ಮಾಡಲಾಗಿದೆ. ಹೀಗೆ ಆಕೆಯ ಮೇಲೆ ೨ ತಿಂಗಳು ಬಲತ್ಕಾರ ಮಾಡಲಾಗಿದೆ. ಜುಲೈ ೩೦ ರಂದು ಪೊಲೀಸರು ದೂರು ದಾಖಲಿಸಿ ಮೋಯಿದ ಖಾನ್ ಮತ್ತು ರಾಜು ಖಾನ್ ನನ್ನು ಬಂಧಿಸಿದ್ದಾರೆ. ಸಮಾಜವಾದಿ ಪಕ್ಷದ ಸ್ಥಳೀಯ ಸಂಸದ ಅವಧೇಶ ಪ್ರಸಾದ್ ಇವರು ಮೊಯಿದ ಖಾನನಿಗೆ ಆಪ್ತರೆಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ಅನುಕಂಪ ತೋರಿಸಲಾಗದು ! ಎಂದು ಹೇಳಿದರು.

ಒಂದು ವಾರ್ತಾ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆ ಅಯೋಧ್ಯೆಯಲ್ಲಿನ ಪುರಕಲಂದರ ಪರಿಸರದಲ್ಲಿ ನಡೆದಿದೆ. ಇಲ್ಲಿಯ ಭದರಸಾ ಚೌಕಿ ಪರಿಸರದಲ್ಲಿ ಮೋಯಿದ ಖಾನನ ಅಂಗಡಿ ಇದೆ. ಇಲ್ಲಿ ಎರಡುವರೆ ತಿಂಗಳ ಹಿಂದೆ ೧೨ ವರ್ಷದ ಹುಡುಗಿ ಆಕೆಯ ತಾಯಿ ಜೊತೆಗೆ ಕೂಲಿ ಕೆಲಸ ಮಾಡಿ ಹಿಂತಿರುತ್ತಿದ್ದಳು. ದಾರಿಯಲ್ಲಿ ಮೋಯಿದ ಖಾನನ ಅಂಗಡಿಯಲ್ಲಿ ಕೆಲಸ ಮಾಡುವ ರಾಜು ಖಾನ್ ಇವನು ಸಂತ್ರಸ್ತೆಗೆ ಆಮಿಷ ಒಡ್ಡಿ ಅಂಗಡಿಗೆ ಕರೆಸಿದನು. ಈ ಹುಡುಗಿ ಈ ಹಿಂದೆ ಕೂಡ ಈ ಅಂಗಡಿಗೆ ಬರುತ್ತಿದ್ದಳು. ಆದ್ದರಿಂದ ಆಕೆ ಅವನ ಮೇಲೆ ವಿಶ್ವಾಸ ಇಟ್ಟು ಅಲ್ಲಿಗೆ ಹೋದಳು.

ಅಂಗಡಿಯಲ್ಲಿ ಹುಡುಗಿಯ ಮೇಲೆ ಇಬ್ಬರೂ ಸಾಮೂಹಿಕ ಬಲಾತ್ಕಾರ ಮಾಡಿದರು. ಆ ಸಮಯದಲ್ಲಿ ಆರೋಪಿಗಳು ಬಲಾತ್ಕಾರದ ವಿಡಿಯೋ ಕೂಡ ಮಾಡಿದರು. ವಿಡಿಯೋ ತೋರಿಸಿ ಆಕೆಗೆ ಬೆದರಿಸಿ ಇಬ್ಬರೂ ಸಂತ್ರಸ್ತೆಯ ಮೇಲೆ ಎರಡು ತಿಂಗಳು ಬಲತ್ಕಾರ ಮಾಡಿದ್ದಾರೆ. ಇದರಿಂದ ಸಂತ್ರಸ್ತೇ ಗರ್ಭಿಣಿಯಾಗಿದ್ದಾಳೆ. ಹುಡುಗಿ ಹೊಟ್ಟೆ ನೋವು ಎಂದು ಹೇಳಿದ ನಂತರ ತಾಯಿಗೆ ಅನುಮಾನ ಬಂದಿದೆ. ಸಂತ್ರಸ್ತೆಯು ಸಂಪೂರ್ಣ ಘಟನೆಯ ಬಗ್ಗೆ ಆಕೆಯ ತಾಯಿಗೆ ಹೇಳಿದಳು. ಕೊನೆಗೆ ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರು ನೀಡಲಾಯಿತು.
ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಈ ಪ್ರಕರಣದ ಮಾಹಿತಿ ದೊರೆಯುತ್ತಲೇ ಅವರು ಪೊಲೀಸ ಠಾಣೆಗೆ ತಲುಪಿ ಘೋಷಣೆಗಳನ್ನು ಕೂಗಿದರು ಮತ್ತು ಆರೋಪಿಯ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನರನ್ನು ಓಲೈಸುವ ಸಮಾಜವಾದಿ ಪಕ್ಷ ಹಾಗೂ ಅಲ್ಲಿಯ ಮುಸಲ್ಮಾನರು ಈಗ ಇಂತಹ ಕಾಮುಕರಿಗೆ ಶರಿಯಾ ಕಾನೂನಿನ ಪ್ರಕಾರ ಭೂಮಿಯಲ್ಲಿ ಮೋಯಿದ ಖಾನ್ ಇವನನ್ನು ಸೊಂಟದವರೆಗೆ ಹೂಗಿದು ಕಲ್ಲಿನಿಂದ ಹೊಡೆದು ಸಾಯಿಸಲು ಯಾರಾದರೂ ಆಗ್ರಹಿಸುವರೇ ?