Astrologer Words Became True : ಪುಣೆಯ ಜ್ಯೋತಿಷಿ ಸಿದ್ದೇಶ್ ಮಾರ್ಟ್ಕರ್ ಭವಿಷ್ಯ ನಿಜವಾಯಿತು !

ಜುಲೈ ತಿಂಗಳಲ್ಲಿ, ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಅಪಾರ ಹಾನಿ ಆಯಿತು!

ಜ್ಯೋತಿಷಿ ಸಿದ್ದೇಶ್ ಮಾರ್ಟ್ಕರ್

ಪುಣೆ – ಜುಲೈ-ಆಗಸ್ಟ್ 2024 ರ ಅವಧಿಯಲ್ಲಿ ಸಂಭವಿಸುವ ಘಟನೆಗಳ ಕುರಿತು ‘ಜ್ಯೋತಿಷ್ ಜ್ಞಾನ್’ ತ್ರೈಮಾಸಿಕದಲ್ಲಿ ಭವಿಷ್ಯವಾಣಿಯ ಪ್ರಕಾರ, ”ಪ್ರವಾಹ, ಅತಿವೃಷ್ಟಿ, ಭೂಕಂಪದಿಂದ ಅಪಾರ ಹಾನಿ ಉಂಟಾಗಬಹುದು. ಮಹಾರಾಷ್ಟ್ರದ ಪ್ರಮುಖ ನಗರಗಳು ಪ್ರವಾಹಕ್ಕೆ ತುತ್ತಾಗಬಹುದು. ನೀರಿನಲ್ಲಿ ಮುಳುಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಲಿದೆ. ದೇವಾಲಯಗಳು ಮತ್ತು ಶಾಲೆಗಳು ಸಹ ಪ್ರವಾಹದ ಅಪಾಯದಲ್ಲಿದೆ.” ಎಂದು ಹೇಳಲಾಗಿತ್ತು ಪ್ರತ್ಯಕ್ಷದಲ್ಲಿ ಧಾರಾಕಾರ ಮಳೆಯಾಗಿದೆ.

ರಾಜಕೀಯ, ನೈಸರ್ಗಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದೊಡ್ಡ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ. ಇದರೊಂದಿಗೆ ಮೀಸಲಾತಿ ವಿವಾದ ಮತ್ತೊಮ್ಮೆ ಭುಗಿಲೇಳುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ಇದು ಪ್ರತಿಕೂಲ ಸಮಯವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ವಿಭಜನೆಯಾಗಲಿವೆ. ದೊಡ್ಡ ವ್ಯಕ್ತಿಗಳು ಸಾಯುವ ಸಾಧ್ಯತೆಯಿದೆ. ಸಾಮಾಜಿಕ ಮತ್ತು ಕೋಮು ವಿವಾದಗಳು ಹೆಚ್ಚಾಗುವ ಸಾಧ್ಯತೆ ಇದೆ. ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ಘೋಷಣೆಯಾಗಬಹುದು. ವಿಚಿತ್ರವಾದ ಸಾಂಕ್ರಾಮಿಕ ರೋಗಗಳು ಬರುತ್ತದೆ. ಆ ಸಮಯದಲ್ಲಿ ಆಧುನಿಕ ವೈದ್ಯರು ಮತ್ತು ಶಿಕ್ಷಕರಿಂದ ಮುಷ್ಕರಗಳು, ಬಂದ್‌ಗಳು ಮತ್ತು ಪ್ರತಿಭಟನೆಗಳು ನಡೆಯುತ್ತವೆ. ಬ್ಯಾಂಕ್ ಗಳ ಬಡ್ಡಿ ದರದಲ್ಲಿ ಭಾರಿ ಏರಿಕೆಯಾಗಲಿದೆ”, ಎಂದೂ ಅವರು ಈ ಪತ್ರಿಕೆಯಲ್ಲಿ ಭವಿಷ್ಯ ನುಡಿದಿದ್ದಾರೆ.

ಸಂಪಾದಕೀಯ ನಿಲುವು

ಜ್ಯೋತಿಷ್ಯಶಾಸ್ತ್ರವನ್ನು ಧಿಕ್ಕರಿಸುವ ಬುದ್ಧಿಪ್ರಾಮಾಣಿಕರು ಇದರ ಬಗ್ಗೆ ಏನು ಹೇಳುತ್ತಾರೆ ?