Gangster Encountered: ಉತ್ತರ ಪ್ರದೇಶದಲ್ಲಿನ ಕುಖ್ಯಾತ ದರೋಡೆಕೋರ ಶಹಾನೂರ್ ಚಕಮಕಿಯಲ್ಲಿ ಹತ್ಯೆ !

ದರೋಡೆ ಮಾಡುವಾಗ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ, ೩೨ ದೂರುಗಳು ದಾಖಲು !

ಶಹಾಜಹಾಪುರ (ಉತ್ತರಪ್ರದೇಶ) – ಉತ್ತರಪ್ರದೇಶ ಪೊಲೀಸರ ವಿಶೇಷ ಕೃತಿ ಪಡೆಗೆ ಒಂದು ದೊಡ್ಡ ಯಶಸ್ಸು ದೊರೆತಿದೆ, ಇಲ್ಲಿ ಕುಖ್ಯಾತ ದರೋಡೆಕೋರ ಶಹಾನೂರ್ ನನ್ನು ಮುಗಿಸಿದ್ದಾರೆ. ಅವನ ಜೊತೆ ನಡೆದಿರುವ ಒಂದು ಚಕಮಕಿಯ ಗುಂಡಿನ ದಾಳಿಯಲ್ಲಿ ಪೊಲೀಸರಿಂದ ಪ್ರತೀದಾಳಿಯಲ್ಲಿ ಅವನ ಎದೆಗೆ ಗುಂಡು ತಾಗಿದೆ. ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ; ಆದರೆ ಡಾಕ್ಟರರು ಅವನನ್ನು ಮೃತ ಎಂದು ಘೋಷಿಸಿದ್ದಾರೆ.

ಶಹಾನೂರ ಇವನು ಅನೇಕ ಸ್ಥಳಗಳಲ್ಲಿ ದರೋಡೆ ನಡೆಸಿದ್ದನು. ದರೋಡೆ ನಡೆಸುವಾಗ ಅವನು ಅಲ್ಲಿಯ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದನು. ಪೊಲೀಸರು ಕಳೆದ ಎರಡುವರೆ ತಿಂಗಳಿಂದ ಅವನನ್ನು ಹುಡುಕುತ್ತಿದ್ದರು. ಅವನ ಮೇಲೆ ಒಂದು ಲಕ್ಷ ರೂಪಾಯಿ ಬಹುಮಾನ ಕೂಡ ಘೋಷಿಸಲಾಗಿತ್ತು. ಶಹಾನೂರ್ ಅಲಿಯಾಸ್ ಶಾನು ಇವನು ಸಂಭಲ ಜಿಲ್ಲೆಯಲ್ಲಿನ ನಿವಾಸಿ ಆಗಿದ್ದನು. ಅನೇಕ ಜಿಲ್ಲೆಯಲ್ಲಿ ದರೋಡೆ, ಹತ್ಯೆ, ಬಂಡಾಯ, ಮುಂತಾದ ಅಪರಾಧಗಳಲ್ಲಿ ಅವನ ವಿರುದ್ಧ ೩೨ ಕ್ಕಂತಲೂ ಹೆಚ್ಚಿನ ದೂರುಗಳು ದಾಖಲಾಗಿದ್ದವು.

ಪೊಲೀಸರು ಶಹಾನೂರ್ ಇವನು ಶಹಾಜಹಾಪುರದಲ್ಲಿ ಇರುವುದು ತಿಳಿಯಿತು. ರಾತ್ರಿ ೧ ಗಂಟೆಗೆ ಪೊಲೀಸರು ಅವನಿಗೆ ಮುತ್ತಿಗೆ ಹಾಕಿದರು. ಅವನು ಸ್ವತಃ ಪೊಲೀಸರಿಗೆ ಶರಣಾಗಲು ಪೊಲೀಸರು ಕರೆ ನೀಡಿದರು; ಆದರೆ ಅವನು ಪೋಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದನು. ಸುಮಾರು ೧೨ ನಿಮಿಷದಲ್ಲಿ ಶಹಾನುರ್ ಮತ್ತು ಅವನ ಸಹಚರರು ಹಾಗೂ ಪೊಲೀಸರ ನಡುವೆ ಗುಂಡಿನ ದಾಳಿ ನಡೆಯಿತು. ಅವನ ಓರ್ವ ಸಹಚರ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾನೆಂದು ಪೊಲೀಸರು ಹೇಳಿದರು.

ಸಂಪಾದಕೀಯ ನಿಲುವು

ಎಲ್ಲೆಡೆ ಪೊಲೀಸರು ಈ ರೀತಿ ದರೋಡೆಕೋರರನ್ನು ವ್ಯೂಹ ರಚಿಸಿ ಇದೇ ರೀತಿ ಮುಗಿಸಬೇಕು, ಹೀಗೆ ಸಾಮಾನ್ಯ ಜನರು ನಿರಂತರ ಹೆಚ್ಚುತ್ತಿರುವ ಅಪರಾಧದ ಬಗ್ಗೆ ಹೇಳುತ್ತಿದ್ದಾರೆ, ಇದರಲ್ಲಿ ತಪ್ಪೇನು ಇಲ್ಲ !