Asaduddin Owaisi on Pilgrimage Scheme : ‘ಯೋಜನೆಯಲ್ಲಿ ಮುಸಲ್ಮಾನ ಸಮುದಾಯದ ಕೇವಲ 2 ಸ್ಥಳಗಳ ಹೆಸರು ಸೇರ್ಪಡೆ !’

‘ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ’ ಕುರಿತು ಅಸಾದುದ್ದೀನ್ ಓವೈಸಿ ಕೆಂಡಾಮಂಡಲ !

ಮುಂಬಯಿ – ರಾಜ್ಯ ಸರಕಾರವು ‘ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ’ ಘೋಷಿಸಿದ ನಂತರ, ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇವರು ಕಿಡಿಕಾರಿದ್ದಾರೆ. ಅವರು ಎಕ್ಸನಲ್ಲಿ, “139 ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದ ಕೇವಲ 2 ಪವಿತ್ರ ಸ್ಥಳಗಳು, ಕೆಲವು ಗುರುದ್ವಾರಗಳು ಮತ್ತು ಚರ್ಚ್‌ಗಳು ಸೇರಿವೆ. ಉಳಿದಂತೆ ಹೆಚ್ಚಿನ ತೀರ್ಥಕ್ಷೇತ್ರಗಳು ಹಿಂದೂಗಳದ್ದಾಗಿವೆ. ಇದು ಓಲೈಸುವಿಕೆಯಲ್ಲವೇ?” ಎಂದು ಹೇಳಿದ್ದಾರೆ.

ಈ ಯೋಜನೆಯಡಿ, 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ದೇಶದ 66 ಯಾತ್ರಾಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಈ ಯೋಜನೆ ಆದಾಯ ತೆರಿಗೆ ಪಾವತಿದಾರರಿಗೆ ಅಥವಾ ವಾರ್ಷಿಕ ಆದಾಯ ಎರಡೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಇರುವವರಿಗೆ ಅನ್ವಯಿಸುವುದಿಲ್ಲ.

ಸಂಪಾದಕೀಯ ನಿಲುವು

  • ಇದು ಹಿಂದೂಸ್ಥಾನವಾಗಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, ಮಹಾರಾಷ್ಟ್ರದಲ್ಲಿ ಬಹುಸಂಖ್ಯಾತ ಹಿಂದೂಗಳಿದ್ದಾರೆ. ಆದ್ದರಿಂದ, ಈ ಯೋಜನೆಯಲ್ಲಿ ಹಿಂದೂ ತೀರ್ಥಕ್ಷೇತ್ರಗಳ ಸಂಖ್ಯೆ ಹೆಚ್ಚು ಇರುವುದು ಸಹಜ !
  • ಮುಸ್ಲಿಮರಿಗೆ ಎಷ್ಟೇ ಸೌಲಭ್ಯಗಳನ್ನು ನೀಡಿದರೂ ಅವರಿಗೆ ತೃಪ್ತಿ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ !