ಠಾಣೆಯಲ್ಲಿ ಮತಾಂಧರಿಂದ ರಿಕ್ಷಾ ಚಾಲಕನ ಮೇಲೆ ಚೂರಿಯಿಂದ ದಾಳಿ !

ಠಾಣೆ – ಮುಖ್ಯಮಂತ್ರಿಗಳ ನಿವಾಸದ ಕೆಲವೇ ಅಂತರದಲ್ಲಿ ಮತಾಂಧರು ಮಹಿಳೆಗೆ ಕಿರುಕುಳ ನೀಡಿದ ಹಾಗೂ ಮತಾಂಧರ ಗುಂಪೊಂದು ದೇವಸ್ಥಾನಕ್ಕೆ ನುಗ್ಗಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ ಘಟನೆ ಮಾಸುವ ಮುನ್ನವೇ ಶಹಬಾಜ್ ಖಾನ್ ಓರ್ವ ರಿಕ್ಷಾ ಚಾಲಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಜುಲೈ 12 ರಂದು ಸಂಜೆ ಘೋಡ್‌ಬಂದರ್ ಪ್ರದೇಶದಲ್ಲಿ, ಶೆಹಬಾಜ್ ಖಾನ್ ಮೇಲೆ ನೀರು ಚಿಮ್ಮಿದ್ದರಿಂದ ಆತ ರಿಕ್ಷಾ ಚಾಲಕನಿಗೆ ಇರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಡುರಸ್ತೆಯಲ್ಲಿ ಈ ಘಟನೆ ನಡೆದಿರುವುದರಿಂದ ರಿಕ್ಷಾ ಚಾಲಕರ ಸಹಿತ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಿಕ್ಷಾ ಚಾಲಕರ ಸಂಘ ಒತ್ತಾಯಿಸಿದೆ.

ಸಂಪಾದಕೀಯ ನಿಲುವು

ಮತಾಂಧರಿಗೆ ಪೊಲೀಸರ ಭಯವಿಲ್ಲ ಎಂಬುದು ಇದು ತೋರಿಸುತ್ತದೆ ! ಇದು ಪೊಲೀಸರಿಗೆ ನಾಚಿಕೆಗೇಡು !