House on Fire: ಪುತ್ತೂರಿನಲ್ಲಿ ಮನೆ ಸುಟ್ಟು ಬೂದಿಯಾದರೂ ಗ್ರಾಮ ದೇವತೆಯ ಚಿತ್ರ ಸುರಕ್ಷಿತ !

ಪುತ್ತೂರು – ಪುತ್ತೂರಿನ ಜಿಡೇಕಲ್ಲು ಕಾಲೇಜು ಬಳಿ ಕೆಲವು ದಿನಗಳ ಹಿಂದೆ ರೆಫ್ರಿಜರೇಟರ್ ಸ್ಫೋಟಗೊಂಡು ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಮನೆ ಸುಟ್ಟು ಬೂದಿಯಾಗಿದ್ದರೂ ಮನೆಯಲ್ಲಿದ್ದ ಗ್ರಾಮ ದೇವತೆ ಶ್ರೀ ಕಲ್ಲುರ್ಟಿಯ ಪ್ರತಿಮೆಗೆ ಏನೂ ಆಗಲಿಲ್ಲ. ‘ಇದರಿಂದ ದೇವರ ಸ್ಥಾನದಲ್ಲಿ ಶಕ್ತಿ ಇದೆ ಎಂದು ಜನರು ಅನುಭೂತಿ ತೆಗೆದುಕೊಂಡರು’, ಎಂದು ಹೇಳಲಾಗುತ್ತಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮನೆಗೆ ಬೆಂಕಿ ಹೊತ್ತಿಕೊಂಡಾಗ ಸ್ಥಳೀಯರು ಅದನ್ನು ನಂದಿಸಲು ಪ್ರಯತ್ನಿಸಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.