Karnataka BJP Workers Attacked : ಇತ್ತ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸಮಾರಂಭ, ಅತ್ತ ಭಾಜಪದ ಕಾರ್ಯಕರ್ತರ ಮೇಲೆ ಮುಸಲ್ಮಾನರಿಂದ ಮಾರಣಾಂತಿಕ ಹಲ್ಲೆ

  • ಮಂಗಳೂರಿನಲ್ಲಿ ನಡೆದ ಘಟನೆ !

  • ಮೂರು ಜನರಿಗೆ ಗಾಯ : ಒಬ್ಬನ ಸ್ಥಿತಿ ಗಂಭೀರ

ಮಂಗಳೂರು – ಇಲ್ಲಿಯ ಬೋಳಿಯಾರು ಪ್ರದೇಶದಲ್ಲಿ ಭಾಜಪದ ೩ ಕಾರ್ಯಕರ್ತರ ಮೇಲೆ ೩೦ ರಿಂದ ೪೦ ಮತಾಂಧ ಮುಸಲ್ಮಾನರು ಚಾಕೂವಿನಿಂದ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಹರೀಶ, ನಂದಕುಮಾರ ಮತ್ತು ಕೃಷ್ಣ ಕುಮಾರ ಈ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದರಲ್ಲಿ ಹರೀಶ ಗಂಭೀರವಾಗಿ ಗಾಯಗೊಂಡಿದ್ದಾನೆ. ಎಲ್ಲಾ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಭಾಜಪದ ಕಾರ್ಯಕರ್ತರು ನರೇಂದ್ರ ಮೋದಿ ಇವರ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸಮಾರಂಭ ದ್ವಿಚಕ್ರ ವಾಹನದಲ್ಲಿ ಆನಂದದಿಂದ ಮೆರವಣಿಗೆಯನ್ನು ಆಚರಿಸುತ್ತಿದ್ದರು. ಅದರ ನಂತರ ಈ ಮೂವರು ಮನೆಗೆ ಹಿಂತಿರುಗಿತ್ತಿರುವಾಗ ಮತಾಂಧರು ದ್ವಿಚಕ್ರ ವಾಹನದಿಂದ ಬೆಂಬತ್ತಿ ಬೋಳಿಯಾರು ಪ್ರದೇಶದ ಮಸೀದಿಯ ಹತ್ತಿರ ಅವರ ಮೇಲೆ ಹಲ್ಲೆ ನಡೆಸಿದರು. ಪೊಲೀಸರು ಈ ಪ್ರಕರಣದಲ್ಲಿ ೨೦ ಜನರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

ಹಿಂದೂಗಳು ತಿರುಗಿನಿಂತರೇ ಅದಕ್ಕೆ ಪೊಲೀಸರು ಮತ್ತು ಆಡಳಿತವೇ ಹೊಣೆ ! – ಹಿಂದೂ ಜಾಗರಣ ವೇದಿಕೆಯ ಎಚ್ಚರಿಕೆ

ಹಿಂದೂಗಳ ಮೇಲಿನ ಹಲ್ಲೆ ಘಟನೆಗಳು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೀತಿ ಮುಸ್ಲಿಂ ಗಲಭೆಕೋರರನ್ನು ಪ್ರೋತ್ಸಾಹಿಸುತ್ತಿದೆ. ಇಂತಹ ಘಟನೆಗಳು ಮುಂದುವರಿದರೆ, ಜಾಗೃತ ಹಿಂದೂ ಸಮಾಜವು ಪ್ರತಿಕ್ರಿಯಿಸಲು ಪ್ರಾರಂಭಿಸಿದರೆ ಪೊಲೀಸ್ ಮತ್ತು ಆಡಳಿತವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ.