Why BJP Lost Ayodhya : ಅಯೋಧ್ಯೆಯಲ್ಲಿ ಅಯೋಗ್ಯ ಅಭ್ಯರ್ಥಿಯ ಆಯ್ಕೆಯಿಂದ ಬಿಜೆಪಿಗೆ ಸೋಲು ! – ಪೇಜಾವರಶ್ರೀ

ಪೇಜಾವರಶ್ರೀಗಳ ದಾವೆ !

ಬೆಳಗಾವಿ – ಉತ್ತರ ಪ್ರದೇಶದ ಅಯೋಧ್ಯ ಲೋಕಸಭಾ ಕ್ಷೇತ್ರದಲ್ಲಿ ತಪ್ಪು ಅಭ್ಯರ್ಥಿಯ ಆಯ್ಕೆ ಮಾಡಿದ್ದರಿಂದ ಬಿಜೆಪಿ ಸೋತಿದೆ, ಎಂದು ಇಲ್ಲಿ ವರದಿಗಾರರೊಂದಿಗೆ ಮಾತನಾಡುವಾಗ ಪಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರು ದಾವೆ ಮಾಡಿದರು. ಸ್ವಾಮಿಜಿ ಮಾತು ಮುಂದುವರೆಸಿ, ಅಯೋಧ್ಯೆಯಲ್ಲಿರುವ ಶ್ರೀ ರಾಮಮಂದಿರದ ನಂತರ, ವಾರಣಾಸಿಯಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯ ಪ್ರಕ್ರಿಯೆಯು ಕಾನೂನಿನಂತೆಯೇ ಆಗಲಿದೆ ಎಂದು ಹೇಳಿದರು.

ರಾಜ್ಯಸರಕಾರ ದೇವಾಲಯಗಳ ಸರಕಾರಿಕರಣಗೊಳಿಸುವುದು ಸೂಕ್ತವಲ್ಲ !

ದೇವಾಲಯದ ಸರಕಾರಿಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿಗಳು, ರಾಜ್ಯಸರಕಾರವು ಹಿಂದೂ ಧಾರ್ಮಿಕ ಕೇಂದ್ರಗಳು, ಮಠಗಳು ಮತ್ತು ದೇವಾಲಯಗಳನ್ನು ಸರ್ಕಾರದ ವ್ಯಾಪ್ತಿಯಲ್ಲಿ ತರಲು ಮುಂದುವರಿಯುವುದು ಸೂಕ್ತವಲ್ಲ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.