ಕೊಪ್ಪಳದಲ್ಲಿ ಒಂದೇ ಕುಟುಂಬದ ಮೂರು ಶವ ಪತ್ತೆ!

ಮತಾಂತರದಿಂದ ಕೊಲೆಯೋ ಅಥವಾ ಆತ್ಮಹತ್ಯೆಯೋ ಶಂಕೆ !

ಬೆಂಗಳೂರು – ಕೊಪ್ಪಳ ಜಿಲ್ಲೆಯ ಹೊಸಲಂಗಾಪುರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಹಿಂದೆ ಮತಾಂತರದ ಆರೋಪ ಮಾಡಲಾಗುತ್ತಿದೆ. ಮೃತರನ್ನು ರಾಮೇಶ್ವರಿ (50 ವರ್ಷ), ಅವರ ಮಗಳು ವಸಂತಾ (32 ವರ್ಷ) ಮತ್ತು ಮೊಮ್ಮಗ ಸಾಯಿಧರ್ಮತೇಜ (5 ವರ್ಷ) ಎಂದು ಗುರುತಿಸಲಾಗಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ವಸಂತಾ ಅವರ ಪತಿ ಆರಿಫ್ ಪರಾರಿಯಾಗಿದ್ದಾನೆ.

2 ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟ ವಸಂತಾ ತನ್ನ ಸಹೋದ್ಯೋಗಿ ಆರಿಫ್ ನನ್ನು ಮದುವೆಯಾಗಿದ್ದಳು. ಆರೀಫ್ ಮೂವರನ್ನು ಇಸ್ಲಾಂಗೆ ಮತಾಂತರ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ವಸಂತಾ ಸಂಬಂಧಿಕರು ಆರೋಪಿಸಿದ್ದಾರೆ. ವಸಂತಾ ಹಾಗೂ ಆಕೆಯ ತಾಯಿ ಮತಾಂತರಕ್ಕೆ ನಿರಾಕರಿಸಿದ್ದರಿಂದ ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆರೀಫ್ ಆಕೆಯ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.