Hindu Youth Killed: ವಿಜಯಪುರದಲ್ಲಿ ಖಾಲಿದ್ ನಿಂದ ಹಿಂದೂ ಯುವಕನ ಬರ್ಬರ ಹತ್ಯೆ !

ಹಣ ವಿವಾದದಿಂದ ಕೊಲೆ ಶಂಕೆ

ವಿಜಯಪುರ – ಇಲ್ಲಿನ ಎ.ಪಿ.ಎಂ.ಸಿ.ಯ ಕುರಿ, ಮೇಕೆ ಮಾರುಕಟ್ಟೆಯ ಬಳಿ ಯುವಕನನ್ನು ಖಾಲಿದ್ ಇನಾಮದಾರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಖಾಲಿದನು ರೋಹಿತ್ ನನ್ನು ಚಾಕುವಿನಿಂದ ಇರಿದು ಕಲ್ಲುಗಳಿಂದ ಜಜ್ಜಿ ಕೊಂದಿದ್ದಾನೆ. ಕೊಲೆಯ ನಂತರ ರೋಹಿತ್ ಶವವನ್ನು ಅಲ್ಲಿನ ಮುಳ್ಳಿನ ಪೊದೆಯಲ್ಲಿ ಎಸೆದು ಖಾಲಿದ್ ಪರಾರಿಯಾಗಿದ್ದ. ಈ ವೇಳೆ ರೋಹಿತ್‌ನ ಸಂಬಂಧಿಕರೊಬ್ಬರಿಗೆ ರೋಹಿತ್‌ನನ್ನು ಇಂಡಿ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿಯಿತು. ಇದನ್ನು ಅರಿತ ರೋಹಿತ್ ಮನೆಯವರು ಹಾಗೂ ನೆರೆಹೊರೆಯವರು ರೋಹಿತ್ ಪತ್ತೆಗೆ ಯತ್ನಿಸಿದ್ದಾರೆ. ಆತನ ದೇಹವನ್ನು ಎ.ಪಿ.ಎಂ.ಸಿ. ಯಾರ್ಡ್ ನ ಮುಳ್ಳಿನ ಪೊದೆಯಲ್ಲಿ ಎಸೆಯಲ್ಪಟ್ಟಿದ್ದು ಕಂಡುಬಂದಿದೆ.

1. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಶ್ವಾನದಳದೊಂದಿಗೆ ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ.

2. ಕೊಲೆಯಾದ ಸ್ಥಳದಲ್ಲಿ ಮಚ್ಚು, ಚಾಕು ಮತ್ತು ಕಲ್ಲುಗಳು ಪತ್ತೆಯಾಗಿವೆ. ಮೆಣಸಿನ ಪುಡಿ ಎರಚಿರುವುದು ಕೂಡ ಬೆಳಕಿಗೆ ಬಂದಿದೆ.

3. ರೋಹಿತ್ ಕುಟುಂಬದ ಪ್ರಕಾರ, ರೂಹಿತ್ ಜೊತೆ ಖಾಲಿದ್ ಇನಾಮದಾರ್ ಹಣದ ವ್ಯವಹಾರ ನಡೆಸಿದ್ದ. ಖಾಲಿದ್ ರೋಹಿತ್ ಬಳಿ ಹಣ ಪಡೆಯುತ್ತಿದ್ದ ಎಂದು ಹೇಳಿದ್ದಾರೆ. ಈ ವಿವಾದದಿಂದ ರೋಹಿತ್‌ನನ್ನು ಖಾಲಿದ್ ಇತರರ ಸಹಾಯದಿಂದ ಕೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

4. ಖಾಲಿದ್ ನನ್ನು ಬಂಧಿಸುವ ಕಾರ್ಯದಲ್ಲಿ ಪೊಲೀಸ್ ವ್ಯವಸ್ಥೆ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧಗಳಲ್ಲಿ ಬಹುಸಂಖ್ಯಾತರು !