‘ನನಗೆ ಸಮುದ್ರದಲ್ಲಿ ಏಕಾಂಗಿಯಾಗಿ ಜಿಗಿಯಬೇಕಿದೆ’, ಎಂದು ವಿಮಾನದಲ್ಲಿದ್ದ ಮುಸಲ್ಮಾನನ ರಂಪಾಟ !

ಮಂಗಳೂರು – ದುಬೈನಿಂದ ಮಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮೊಹಮ್ಮದ್ ಬಿ.ಸಿ. ಹೆಸರಿನ ಪ್ರಯಾಣಿಕನು ವಿಚಿತ್ರವಾಗಿ ವರ್ತಿಸಿದನು. ಅರಬ್ಬಿ ಸಮುದ್ರ ತಲುಪಿದ ತಕ್ಷಣ ‘ನನಗೆ ಒಬ್ಬನೇ ಸಮುದ್ರಕ್ಕೆ ಜಿಗಿಯಬೇಕಿದೆ’ ಎಂದು ಕೂಗುತ್ತ ವಿಮಾನದಲ್ಲಿ ರಂಪಾಟ ಮಾಡಿದನು. ವಿಮಾನದ ಭದ್ರತಾ ಸಂಯೋಜಕ ಸಿದ್ಧಾರ್ಥ್ ದಾಸ್ ಇವರು ಪ್ರಯಾಣಿಕ ಮೊಹಮ್ಮದ್ ಬಿ.ಸಿ. ಇವರ ವಿರುದ್ಧ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಮಾನ ದುಬೈನಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೊಹಮ್ಮದ್ ಅವರು ಕೃಷ್ಣ ಎಂಬುವವರ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆ ಹೆಸರಿನ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುತ್ತಿಲ್ಲ ಎಂದು ಸಿಬ್ಬಂದಿಯು ಮೊಹಮ್ಮದ್‌ಗೆ ತಿಳಿಸಿದ್ದಾರೆ. ಮಹಮ್ಮದ್ ನು ಹಲವಾರು ಬಾರಿ ಸೇವಾ ಬಟನ್ ಒತ್ತುವ ಮೂಲಕ ಸಿಬ್ಬಂದಿಗೆ ಅನಗತ್ಯ ತೊಂದರೆ ನೀಡಿದ್ದರು.