‘ಹಿಂದೂ ಕಾರ್ಯಕರ್ತರು ಎಂದರೆ ಗತಿ ಇಲ್ಲದ ಭಿಕ್ಷುಕರು ! – ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ

ನಾಲಿಗೆ ಹರಿ ಬಿಟ್ಟ ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ !

ಬೆಳಗಾವಿ – ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾವನ್ನಪ್ಪಿದರೆ, ಯಾರು ಪ್ರಧಾನಮಂತ್ರಿ ಆಗುವುದಿಲ್ಲವೇ ? ಎಂದು ಹೇಳಿದ್ದ ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ ಇವರು ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಗವಾಡ ತಾಲೂಕಿನಲ್ಲಿನ ಜುಗುಳ ಈ ಗ್ರಾಮದಲ್ಲಿ ಪ್ರಿಯಾಂಕ ಜಾರಕಿಹೊಳಿ ಇವರ ಪರವಾಗಿ ಪ್ರಚಾರ ಮಾಡುವಾಗ, ಹಿಂದೂ ಕಾರ್ಯಕರ್ತರು ಗತಿ ಇಲ್ಲದ ಭಿಕ್ಷುಕರಾಗಿದ್ದಾರೆ ಎಂದು ಹೇಳಿದರು.

ಶಾಸಕರು ಮಾತು ಮುಂದುವರೆಸುತ್ತಾ, ಜನರ ಸಮಸ್ಯೆ ದೂರಗೋಳಿಸಿದ ನಂತರ ನಾವು ದೇವಸ್ಥಾನಗಳನ್ನು ನಿರ್ಮಾಣ ಮಾಡುವೆವು. ಭಾಜಪದ ಕಾರ್ಯಕರ್ತರಿಗೆ ‘ಜೈ ಶ್ರೀ ರಾಮ್’ ಎಂದಷ್ಟೇ ಘೋಷಣೆ ಕೂಗಲು ಬರುತ್ತದೆ ಎಂದು ಹೇಳಿದರು.