ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ 2 ಪ್ರಾಧ್ಯಾಪಕರ ಅಮಾನತು !

ಜೌನ್ಪುರ (ಉತ್ತರ ಪ್ರದೇಶ) – ವೀರ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿದ್ಯಾಲಯದ ‘ಫಾರ್ಮಸಿ’ ಪದವಿ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಮತ್ತು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಈ ಕ್ರಿಕೆಟ್ ಆಟಗಾರರ ಹೆಸರನ್ನು ಬರೆದಿದ್ದರು. ವಿಚಿತ್ರವೆಂದರೆ, ಈ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿದೆ. ಈ ಪ್ರಕರಣದಲ್ಲಿ ವಿದ್ಯಾಪೀಠದ ಆಡಳಿತವು 2 ಪ್ರಾಧ್ಯಾಪಕರ ವಿರುದ್ಧ ಅಮಾನತು ಕ್ರಮ ಕೈಗೊಂಡಿದೆ. ವಿದ್ಯಾಪೀಠದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದರಲ್ಲಿ ಈ ವಿಷಯ ಬಹಿರಂಗವಾಗಿದೆ.
In #UttarPradesh, 4 students who wrote #JaiShreeRam and cricketers’ names in their answer scripts pass the Pharmacy degree exams
2 professors who valued the answer scripts suspended
This matter came to light through information obtained by former student Divyanshu Singh under… pic.twitter.com/wAOnnkLNoS
— Sanatan Prabhat (@SanatanPrabhat) April 28, 2024
ಉತ್ತರ ಪತ್ರಿಕೆ ತಪಾಸಣೆಯು ದೋಷಪೂರಿತವಾಗಿರುವ ಬಗ್ಗೆ ದಿವ್ಯಾಂಶು ಅವರು ರಾಜಭವನಕ್ಕೆ ಲಿಖಿತವಾಗಿ ದೂರು ನೀಡಿದ್ದರು. ಆ ನಂತರ ಸೆಪ್ಟೆಂಬರ್ 21, 2023 ರಂದು ರಾಜಭವನವು ತನಿಖೆಗೆ ಆದೇಶಿಸಿತು. ವಿದ್ಯಾಪೀಠದ ಆಡಳಿತವು ತನಿಖಾ ಸಮಿತಿಯನ್ನು ನೇಮಿಸಿತು. ಈ ವಿಚಾರಣೆಯಲ್ಲಿ 2 ಪ್ರಾಧ್ಯಾಪಕರು ತಪ್ಪಿತಸ್ಥರೆಂದು ನಿರ್ಧರಿಸಲಾಯಿತು. ಅದರ ಪ್ರಕಾರ ಡಾ. ಅಶುತೋಷ್ ಗುಪ್ತಾ ಮತ್ತು ಡಾ. ವಿನಯ್ ವರ್ಮಾ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿದ್ಯಾಪೀಠದ ಕುಲಪತಿ ಡಾ. ವಂದನಾ ಸಿಂಗ್ ತಿಳಿಸಿದ್ದಾರೆ.
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!