ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸುವ ಯತ್ನ ನಡೆಸಿದ್ದ ಮುಸಲ್ಮಾನನ ಹತ್ಯೆಗೈದ ಪತಿ

ಬೆಂಗಳೂರು – ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರ ಮಗಳು ಕೆಲಸಕ್ಕೆ ಹೋಗುವಾಗ ಮುಸಲ್ಮಾನ ಯುವಕ ಪಾಶಾ, ತನ್ನ ಪ್ರೀತಿಯನ್ನು ಸ್ವೀಕರಿಸು, ಎಂದು ಕಿರುಕುಳ ನೀಡುತ್ತಿದ್ದ. ಆಕೆಯ ಕುಟುಂಬ ಮತ್ತು ಪಾಷಾ ನಡುವೆ ಒಂದು ಬಾರಿ ಜಗಳ ಕೂಡ ನಡೆದಿತ್ತು. ಆ ಯುವತಿಯ ವಿವಾಹವಾದ ನಂತರ ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಆದರೂ ಕೂಡ ಪಾಷಾ ಆಕೆಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದ್ದನು. ಮತ್ತು ಆಕೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನು.

ಈ ಬಗ್ಗೆ ಯುವತಿಯು ತನ್ನ ಪತಿಗೆ ತಿಳಿಸಿದ ನಂತರ ಆಕೆಯ ಪತಿ ಪಾಶಾನ ಊರಿಗೆ ಹೋಗಿ ಕೆಲವು ಜನರ ಸಹಾಯದಿಂದ ಪಾಶಾನ ಹತ್ಯೆ ಮಾಡಿದನು. ನಂತರ ಅವನು ಪೊಲೀಸ್ ಠಾಣೆಗೆ ಹೋಗಿ ಶರಣಾದನು. ವಿಚಿತ್ರವೆಂದರೆ ಪಾಶಾ ವಿವಾಹಿತನಾಗಿದ್ದು ಅವನಿಗೆ ನಾಲ್ಕು ಮಕ್ಕಳು ಕೂಡ ಇದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಸಿಲುಕಿಸುವ ಪ್ರಯತ್ನ ಮಾಡುತ್ತಾರೆ, ಇದು ಬಹಿರಂಗ ಸತ್ಯವಾಗಿರುವಾಗ ಇಂತಹ ಘಟನೆಗಳ ಬಗ್ಗೆ ಶಾಶ್ವತ ಕಡಿವಾಣ ಹಾಕುವುದಕ್ಕಾಗಿ ಯಾವುದೇ ಪಕ್ಷದ ನಾಯಕರು ಏನೂ ಮಾಡುತ್ತಿಲ್ಲ. ಹಾಗಾಗಿ ಇಂತಹ ಘಟನೆಗಳು ಈಗ ಘಟಿಸುತ್ತಿವೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು.