Muslims Given Backward Class Status: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗದವರು ಎಂದು ನಿರ್ಧರಿಸಿದೆ !

ಸರಕಾರಿ ಶೈಕ್ಷಣಿಕ ಸಂಸ್ಥೆ ಮತ್ತು ನೌಕರಿಯಲ್ಲಿ ಮೀಸಲಾತಿ !

ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿನ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಅವರಿಗೆ ಸರಕಾರದ ಆಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವರು. ಮುಸಲ್ಮಾನರನ್ನು ಇತರ ಹಿಂದುಳಿದವರ ಪಟ್ಟಿಯಲ್ಲಿ ಸೇರಿಸಿದ್ದಾರೆ. ರಾಜ್ಯದಲ್ಲಿ ಮುಸಲ್ಮಾನರು ಶೇಕಡ ೧೨.೯೨ ರಷ್ಟು ಇದ್ದಾರೆ. ಅವರಿಗೆ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರೆಂದು ಹೇಳಲಾಗಿದೆ.

ಈ ನಿರ್ಣಯದ ಬಗ್ಗೆ ಪ್ರಧಾನಮಂತ್ರಿ ಮೋದಿ ಇವರು ಟೀಕಿಸಿದ್ದಾರೆ. ಅವರು, ಕಾಂಗ್ರೆಸ್ಸಿಗೆ ಹಿಂದುಳಿದ ಜಾತಿ ಮತ್ತು ಜನಾಂಗ ಹಾಗೂ ಇತರ ಹಿಂದುಳಿದ ವರ್ಗದ ಅಧಿಕಾರ ಮುಸಲ್ಮಾನರಿಗೆ ನೀಡುವುದಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಜಗತ್ತಿನಲ್ಲಿ ಒಂದೇ ಒಂದು ಇಸ್ಲಾಮಿ ದೇಶದಲ್ಲಿ ಕೂಡ ಮುಸಲ್ಮಾನರಿಗೆ ಹಿಂದುಳಿದವರೆಂದು ಹೇಳಿ ಮೀಸಲಾತಿ ನೀಡಿಲ್ಲ; ಆದರೆ ಕಾಂಗ್ರೆಸ್ ಮಾತ್ರ ಇದನ್ನು ಸಾಧಿಸಿದೆ !
  • ‘ಭಾರತದ ಸಂಪತ್ತಿಗಳ ಮೇಲೆ ಮೊದಲ ಅಧಿಕಾರ ಮುಸಲ್ಮಾನರದ್ದಾಗಿದೆ’, ಈ ಯೋಚನೆಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ದೇಶ ಇಸ್ಲಾಮಿಕರಣಗೊಳಿಸಿದರೆ ಆಶ್ಚರ್ಯ ಅನಿಸಬಾರದು ! ಈ ಪರಿಸ್ಥಿತಿ ಬರುವ ಮೊದಲೇ ಹಿಂದುಗಳು ಕಾಂಗ್ರೆಸ್ಸನ್ನು ರಾಜಕೀಯ ದೃಷ್ಟಿಯಿಂದ ಮುಗಿಸುವುದು ಅವಶ್ಯಕವಾಗಿದೆ !