ಬಾಬಾ ತರಸೆಮ ಸಿಂಗ್ ಅವರ ಹತ್ಯೆಗೈದವನು ಪೊಲೀಸ್ ಚಕಮಕಿಯಲ್ಲಿ ಸಾವು !

ಹರಿದ್ವಾರ (ಉತ್ತರಾಖಂಡ) – ರಾಜ್ಯದ ಉಧಮ ಸಿಂಗ್ ನಗರದಲ್ಲಿನ ನಾನಕಮಟ್ಟಾ ಗುರುದ್ವಾರದ ಕರಸೇವಾ ಮುಖ್ಯಸ್ಥರಾಗಿದ್ದ ಬಾಬಾ ತರಸೆಮ ಸಿಂಗ್ ಅವರ ಹತ್ಯೆಯ ಆರೋಪಿ ಅಮರಜೀತ ಸಿಂಗ್ ಎಂಬವನನ್ನು ಪೊಲೀಸ್ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಈ ಕೊಲೆಯ ಎರಡನೇ ಆರೋಪಿ ಸರಬಜೀತ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಇವರಿಬ್ಬರೂ ಸೇರಿ ಬಾಬಾ ತರಸೆಮ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಾಬಾ ತರಸೆಮ ಸಿಂಗ್ ಇವರ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.