‘ಬಂಗಾಳದಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ (‘ಎನ್.ಆರ್.ಸಿ’) ಅನ್ನು ಜಾರಿಗೆ ತಂದರೆ, ಇಡೀ ಭಾರತವು ಹೊತ್ತಿ ಉರಿಯಲಿದೆಯಂತೆ ! – ಲಷ್ಕರ್-ಎ-ತೊಯ್ಬಾ

‘ಲಷ್ಕರ್-ಎ-ತೊಯ್ಬಾ’ ಹೆಸರಿನಲ್ಲಿ ಕೇಂದ್ರ ಸಚಿವರಿಗೆ ಬೆದರಿಕೆ ಪತ್ರ !

ಕೋಲಕಾತಾ (ಬಂಗಾಳ) – ‘ಲಷ್ಕರ್-ಎ-ತೊಯ್ಬಾ’ ಈ ಭಯೋತ್ಪಾದಕ ಸಂಘಟನೆಯು ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (‘ಎನ್‌ಆರ್.ಸಿ’) ಅಂಶಗಳ ಆಧಾರದ ಮೇಲೆ ಕೇಂದ್ರ ಸಚಿವ ಶಂತನು ಠಾಕೂರ್ ಅವರಿಗೆ ಬೆದರಿಕೆ ಪತ್ರ ಕಳುಹಿಸಿದೆ. ಶಂತನು ಠಾಕೂರ ಇವರಿಗೆ ಈ ಪತ್ರವನ್ನು ಏಪ್ರಿಲ್ 8 ರಂದು ನಜರುಲ ಇಸ್ಲಾಂ ಸಾಹಿಬ ಅಲಿ ಮತ್ತು ಫೈಜ್ ಅಲಿ ಎಂಬ ಹೆಸರಿನ ವ್ಯಕ್ತಿಗಳು ಪೋಸ್ಟ ಮೂಲಕ ಕಳುಹಿಸಿದ್ದನು. ಬೆದರಿಕೆಯ ಪತ್ರವು ಉತ್ತರ 24 ಪರಗಣಾದ ದೇಗಂಗಾದ ಹದಿಪುರ ಗ್ರಾಮದಿಂದ ಕಳುಹಿಸಲಾಗಿತ್ತು.

(ಸೌಜನ್ಯ – News18 India)

1. ಬಂಗಾಳಿ ಭಾಷೆಯಲ್ಲಿ ಬರೆದ ಈ ಪತ್ರದಲ್ಲಿ, ಒಂದು ವೇಳೆ ಬಂಗಾಳದಲ್ಲಿ ಎನ್.ಆರ್.ಸಿ. ಜಾರಿಗೊಳಿಸಿದರೆ ಮತ್ತು ಅದರಿಂದ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದರೆ, ಬಂಗಾಳ ಮತ್ತು ಸಂಪೂರ್ಣ ಭಾರತ ಹೊತ್ತಿ ಉರಿಯುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ನಿಮ್ಮ ಟ್ಯಾಗೋರ್ ಹೌಸ್ ಧ್ವಂಸಗೊಳಿಸಲಾಗುತ್ತದೆ. ನೀವು ಲಷ್ಕರ್-ಎ-ತೊಯ್ಬಾದ ಹೆಸರು ಕೇಳಿದ್ದೀರಾ ? ನಾವು ಲಷ್ಕರ್-ಎ-ತೋಯಬಾ ಸದಸ್ಯರಾಗಿದ್ದೇವೆ.

2. ಶಾಂತನು ಠಾಕೂರ್ ಮಾತನಾಡಿ, ನಾನು ಮುಖ್ಯಮಂತ್ರಿಗಳಿಗೆ ಹೇಳುವುದೇನೆಂದರೆ, ಭಯೋತ್ಪಾದಕ ಸಂಘಟನೆ ಈ ರೀತಿ ರಾಜ್ಯದ ಸಂಸದ ಮತ್ತು ಮಂತ್ರಿಗಳನ್ನು ಬೆದರಿಸಲು ಸಾಧ್ಯವಿಲ್ಲ. ಬಂಗಾಳದಲ್ಲಿ ಪ್ರಜಾಪ್ರಭುತ್ವ ವಿರೋಧಿ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಭಯೋತ್ಪಾದಕರಿಗೆ ತೃಣಮೂಲ ಕಾಂಗ್ರೆಸ್ ಬೆಂಬಲಿಸಿ, ಸಾಕುತ್ತಿದೆ ಮತ್ತು ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಗೃಹ ಸಚಿವರಿಗೆ ಹೇಳುತ್ತೇನೆ, ನನಗೆ ನ್ಯಾಯಬೇಕಾಗಿದೆ, ಈ ಘಟನೆ ಬಂಗಾಳಕ್ಕೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಬೆದರಿಕೆಗಳನ್ನು ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಬೇರೆ ಯಾರು ನೀಡುತ್ತಿದ್ದಾರೆಯೇ ? ಎಂದು ಮೊದಲು ವಿಚಾರಣೆ ಮಾಡುವುದು ಅವಶ್ಯಕವಾಗಿದೆ !