ತೆಲಂಗಾಣದಲ್ಲಿ ಮಸೀದಿ ಬಳಿ ಹೋಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ದಾಳಿ

ನಮಾಜ್ ವೇಳೆ ಧ್ವನಿವರ್ಧಕದಲ್ಲಿ ಹಾಡು ಹಾಕಿದ್ದಕ್ಕೆ ದಾಳಿ

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಮೆಡ್ಚಲ-ಮಲಕಾಜ್ಗಿರಿ ಜಿಲ್ಲೆಯ ಚೆಂಗೀಚೆರ್ಲಾ ಪ್ರದೇಶದಲ್ಲಿ ಹೋಳಿಯ ಹಬ್ಬ ಆಚರಿಸುವಾಗ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿಯ ಮಸೀದಿಯ ಬಳಿ ಹೋಳಿ ಹೊತ್ತಿಸಿದ ನಂತರ ಧ್ವನಿವರ್ಧಕದಲ್ಲಿ ಹಾಡನ್ನು ಹಾಕಿದ್ದರಿಂದ ಈ ಘಟನೆ ನಡೆದಿದೆ. ಇದರಲ್ಲಿ ಮಹಿಳೆಯು ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ. ಈ ಘಟನೆ ಮಾರ್ಚ್ ೨೪ ರ ಸಂಜೆ ನಡೆದಿದೆ. ಇದರಿಂದ ಇಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

ಎ.ಎನ್.ಐ. ಸುದ್ಧಿಸಂಸ್ಥೆಯ ವರದಿಪ್ರಕಾರ, ಪೊಲೀಸರು, ಚೆಂಗೀಚೆರ್ಲಾ ಬ್ರಾಸ ಬಸ್ತಿಯಲ್ಲಿ ಹೋಳಿ ಆಚರಿಸುವಾಗ ಕೆಲವರು ಧ್ವನಿವರ್ಧಕವನ್ನು ಹಾಕಿದ್ದರು. ಆಗ ಕೆಲವರು ಅದನ್ನು ಬಂದ್ ಮಾಡುವಂತೆ ಹೇಳಿದಾಗ ವಾಗ್ವಾದ ನಡೆಯಿತು ಮತ್ತು ಅದರಿಂದ ದಾಳಿಯು ಘಟಿಸಿತು. ಈ ಘಟನೆಯ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಮದ್ಯದ ಅಂಗಡಿಯಲ್ಲಿ ಕಳ್ಳತನ !

(ಸೌಜನ್ಯ – Republic Bharat)

ಮತ್ತೊಂದೆಡೆ ತೆಲಂಗಾಣದ ಖಮ್ಮಂ ಪ್ರದೇಶದ ಟೆಕುಲಾಪಲ್ಲಿ ಪರಿಸರದಲ್ಲಿ ಮದ್ಯದ ಅಂಗಡಿಯ ಮೇಲೆ ದಾಳಿ ನಡೆಸಿ ಅಲ್ಲಿದ್ದ ಮದ್ಯದ ಪೆಟ್ಟಿಗೆಗಳನ್ನು ಕಳವು ಮಾಡಲಾಗಿದೆ. ಇದರಲ್ಲಿ ಮಹಿಳೆಯರೂ ಇದ್ದರು. ಅವರು ಮದ್ಯದ ಪೆಟ್ಟಿಗೆಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಅಂದಾಜು ೧೫ ರಿಂದ ೨೦ ಲಕ್ಷ ರೂಪಾಯಿ ಸಾರಾಯಿ ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾನೆ. ಈ ಸಂಬಂಧ ಪೋಲೀಸರು ದೂರನ್ನು ದಾಖಲಿಸಿಕೊಂಡು ಆರೋಪಿಗಳನ್ನು ಹುಡುಕುತ್ತಿದ್ದಾರೆ. (ಭಾರತೀಯರ ನೈತಿಕತೆ ಅಧೋಗತಿಗೆ ಹೋಗಿದೆ ! ಈ ಸ್ಥಿತಿಗೆ ಸ್ವಾತಂತ್ಯ್ರ ನಂತರದ ಎಲ್ಲಾ ಆಡಳಿತಗಾರರೇ ಹೊಣೆ ! -ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳು ದೇಶಾದ್ಯಂತ ಮಸೀದಿಯಿಂದ ೫ ಬಾರಿ ಭೋಂಗಾ ಮೂಲಕ ಅನಾವಶ್ಯಕ ಅಜಾನ್ ಕೇಳುತ್ತಿದ್ದಾರೆ, ಅನ್ಯ ಧರ್ಮೀಯರೂ ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಹಾಕಲಾಗುವ ಹಾಡುಗಳನ್ನು ಕೇಳಬೇಕು, ಹೀಗೆ ಯಾರಿಗಾದರೂ ಅನ್ನಿಸಿದರೆ, ಅದು ಹೇಗೆ ತಪ್ಪಾಗುತ್ತದೆ ?

ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಬಂದ ತಕ್ಷಣ ಹಿಂದೂಗಳ ಮೇಲೆ ಹಲ್ಲೆ ಘಟನೆಗಳು ಶುರುವಾದವು, ಕಾಂಗ್ರೆಸ್ಸನ್ನು ಅಧಿಕಾರದಲ್ಲಿ ಕೂರಿಸಿದ ಹಿಂದೂಗಳು ಇದನ್ನು ಗಮನಿಸಬೇಕು !