ರಾಷ್ಟ್ರೀಯ ತನಿಖಾ ಇಲಾಖೆಯಿಂದ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ

ಮುಂಬಯಿ – ಮಹಮ್ಮದ್ ಶಹಾನಾಜ್ ಆಲಂ , ರಿಜವಾನ ಅಲಿ, ಅಬ್ದುಲ್ಲಾ ಶೇಖ್, ಮತ್ತು ತಲಾಹ ಲಿಯಾಕತ ಖಾನ್ ಎಂಬ ಇಸ್ಲಾಮಿಕ್ ಸ್ಟೇಟ್ ನ ಈ ಭಯೋತ್ಪಾದಕರು ಪುಣೆ, ಮುಂಬಯಿ ಸಹಿತ ಗುಜರಾತಿನ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಷಡ್ಯಂತ್ರ ರೂಪಿಸಿದ್ದರು, ಎಂದು ರಾಷ್ಟ್ರೀಯ ತನಿಖಾ ಇಲಾಖೆ(ಎನ್ಐಎ ) ಮುಂಬಯಿ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ಇಲಾಖೆಯು ಇತ್ತೀಚಿಗೆ ಈ ಕುರಿತು ಮೂರನೆಯ ಪುರವಣಿ (ಸಪ್ಲಿಮೆಂಟರಿ) ಆರೋಪ ಪತ್ರವನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದೆ.
ಪುಣೆಯಲ್ಲಿನ ಕೊಂಢವಾ ಪ್ರದೇಶದಲ್ಲಿ ಈ ಆತಂಕಿಗಳು ಬಾಂಬ್ ತಯಾರಿಸುವ ಪ್ರಶಿಕ್ಷಣ ಪಡೆದಿದ್ದರು. ಕೊಲ್ಹಾಪುರ್ ಮತ್ತು ಸಾತಾರ ಪ್ರದೇಶದ ಕಾಡಿನಲ್ಲಿ ಅವರು ನಿಯಂತ್ರಿತ ಪದ್ಧತಿಯಿಂದ ಬಾಂಬ್ ಸ್ಫೋಟ ನಡೆಸಿದ್ದರು. ಶಸ್ತ್ರಾಸ್ತ್ರ ಚಾಲನೆಯ ಪ್ರಶಿಕ್ಷಣ ಕೂಡ ಇವರು ಪಡೆದಿದ್ದ ಇವರು ಮಹಾರಾಷ್ಟ್ರದಲ್ಲಿ ಇಸ್ಲಾಮಿಕ್ ಸ್ಟೇಟ್ ವಿಚಾರಧಾರೆಯ ಪ್ರಸಾರ ಮಾಡಿ ಯುವಕರನ್ನು ಪ್ರಚೋದಿಸುತ್ತಿದ್ದರು. ಇವರು ವಿದೇಶದಲ್ಲಿನ ಇಸ್ಲಾಮಿಕ್ ಸ್ಟೇಟ್ ನ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸತಾರಾ ಜಿಲ್ಲೆಯ ಜವಳಿ ಅಂಗಡಿಯೊಂದನ್ನು ದರೋಡೆ ಮಾಡುವ ಮೂಲಕ ಬಾಂಬ್ ತಯಾರಿಕಾ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು ಎಂದು ಎನ್ಐಎ ತಿಳಿಸಿದೆ .
ಸಂಪಾದಕೀಯ ನಿಲುವುಭಾರತದಲ್ಲಿ ಜಿಹಾದಿ ಭಯೋತ್ಪಾದಕರ ಬೇರುಗಳು ಎಷ್ಟು ಆಳವಾಗಿ ಪಸರಿಸಿದೆ, ಈ ಘಟನೆಯಿಂದ ತಿಳಿದು ಬರುತ್ತದೆ. ಈ ಭಯೋತ್ಪಾದನೆಯನ್ನು ತಡೆಯುವುದಕ್ಕಾಗಿ ಸರಕಾರ ದಿಟ್ಟ ಹೆಜ್ಜೆ ಇಡುವುದು ಅವಶ್ಯವಾಗಿದೆ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ