Hindu Girl Murdered: ಅಸ್ಸಾಂನಲ್ಲಿ ಮುಸಲ್ಮಾನ್ ಯುವಕನಿಂದ ಹಿಂದೂ ಹುಡುಗಿಯ ಅಪಹರಣ, ಬಲಾತ್ಕಾರ ಮತ್ತು ಬರ್ಬರ ಹತ್ಯೆ !

ಗೋಹಾಟಿ (ಅಸ್ಸಾಂ) – ಅಸ್ಸಾಂನ ಸರ್ಫರಾಜ ಹುಸೇನ ಎಂಬ ಮುಸಲ್ಮಾನ ಯುವಕನು ಹಿಂದೂ ಹುಡುಗಿಯ ಅಪಹರಣ ಮಾಡಿ ಬಲಾತ್ಕಾರ ಗೈದು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಜನರಲ್ಲಿ ಆಕ್ರೋಶದ ಅಲೆಯೆ ಎದ್ದಿದೆ. ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಾ ಸರ್ಫರಾಜ ಹುಸೇನಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸುತ್ತಿದ್ದಾರೆ.

ಅಸ್ಸಾಂನಲ್ಲಿ ಬೊಂಗೈಗಾವ ಇಲ್ಲಿ ಮಹಾಭಿರಸ್ತಾನ ಪ್ರದೇಶದಲ್ಲಿನ ಆರತಿ ಕುಮಾರಿ ದಾಸ ಎಂಬ ೧೬ ವರ್ಷದ ಹುಡುಗಿ ಮಾರ್ಚ್ ೫, ೨೦೨೪ ರಂದು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಬಂದಿದ್ದಳು. ಆಕೆ ತಡ ರಾತ್ರಿಯವರೆಗೆ ಮನೆಗೆ ಹಿಂತಿರುಗಿ ಬಾರದಿದ್ದಾಗ ಆಕೆಯ ಕುಟುಂಬದವರು ಆಕೆಯ ಹುಡುಕಾಟ ಆರಂಭಿಸಿದರು. ಎಲ್ಲಾ ಪ್ರಯತ್ನ ಮಾಡಿದರು ಆಕೆ ಸಿಗಲಿಲ್ಲ ಆಗ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು ಈ ದೂರಿನ ಆಧಾರದಲ್ಲಿ ಪೊಲೀಸರು ಮಾರ್ಚ್ ೬ ರಂದು ದೂರು ದಾಖಲಿಸಿದರು. ಕೊನೆಗೆ ಪೊಲೀಸರಿಗೆ ಆಕೆಯ ದೇಹ ರಕ್ತದ ಮಡುವಿನಲ್ಲಿ ಸಿಕ್ಕಿತು. ಆರತಿ ಕುಮಾರಿ ದಾಸ ಈಕೆಯನ್ನು ಬಲತ್ಕಾರದ ನಂತರ ಬರ್ಬರ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಜನರಲ್ಲಿ ಆಕ್ರೋಶದ ಅಲೆಯೆ ಎದ್ದಿದೆ. ಆರತಿಯ ಕುಟುಂಬದವರು ಸರ್ಫರಾಜ ಹುಸೇನ್ ಈ ಮುಸಲ್ಮಾನ ಯುವಕನ ವಿರುದ್ಧ ಹುಡುಗಿಯ ಅಪಹರಣ, ಬಲಾತ್ಕಾರ ಮತ್ತು ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಪೊಲೀಸರು ಆರೋಪಿ ಯುವಕನನ್ನು ಹುಡುಕುತ್ತಿದ್ದಾರೆ. ಮೃತ ಆರತಿಯ ಕುಟುಂಬದವರು ಈ ಹಿಂದೆ ಈ ಮುಸಲ್ಮಾನ ಯುವಕನ ವಿರುದ್ಧ ದೂರು ದಾಖಲಿಸಿದ್ದರು. ಹುಡುಗಿಯ ಕುಟುಂಬದವರು, ಸರ್ಫರಾಜ ಹುಸೇನ್ ಇವನು ಅವರ ಹುಡುಗಿಯನ್ನು ಮರಳು ಮಾಡಿ ಒತ್ತೆ ಇಟ್ಟುಕೊಂಡು ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ ಮತ್ತು ನಂತರ ಆಕೆಯನ್ನು ಬರ್ಬರ ಹತ್ಯೆ ಮಾಡಿ ಶವವನ್ನು ರೈಲ್ವೆ ಹಳಿಯ ಮೇಲೆ ಎಸೆದನು ಎಂದು ಆರೋಪಿಸಿದ್ದಾರೆ.

ಬೋಗೈಗಾವದಲ್ಲಿ ಬಿಗುವಿನ ವಾತಾವರಣ ಹೆಚ್ಚಾಗಿರುವುದರಿಂದ ಪೊಲೀಸ್ ಬಂದೋಬಸ್ತ ಮಾಡಿದ್ದಾರೆ. ಆರತಿಗೆ ನ್ಯಾಯ ನೀಡಿ ಎಂದು ಬೇಡಿಕೆಯ ಫಲಕಗಳು ಕೈಯಲ್ಲಿ ಹಿಡಿದು ನೂರಾರು ಜನರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಯಾವುದೇ ಸರಕಾರ ಲವ್ ಜಿಹಾದ್ ತಡೆಯಲು ಸಾಧ್ಯವಾಗುತ್ತಿಲ್ಲ, ಇದು ದೇಶಾದ್ಯಂತ ಮತ್ತೆ ಮತ್ತೆ ಘಟಿಸುವ ಘಟನೆಗಳಿಂದ ಸಿದ್ಧವಾಗುತ್ತಿದೆ. ಆದ್ದರಿಂದ ಲವ್ ಜಿಹಾದ್ ತಡೆಯಲು ಈಗ ಹಿಂದೂ ರಾಷ್ಟ್ರವೇ ಬೇಕು !