‘ನಮೋ ಬ್ರಿಗೇಡ್’ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಇವರ ಮೇಲೆ ಜಿಲ್ಲಾಡಳಿತ ಹೇರಿದ್ದ ಕಲ್ಬುರ್ಗಿ ಪ್ರವೇಶದ ನಿಷೇಧವನ್ನು ಹೈಕೋರ್ಟ್ ನಿಂದ ತೆರುವು !

ಕಲಬುರ್ಗಿ – ಹಿಂದುತ್ವನಿಷ್ಠ ಸಂಘಟನೆ ‘ನಮೋ ಬ್ರಿಗೇಡ್’ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಇವರಿಗೆ ಕಲಬುರ್ಗಿ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಹಿಂಪಡೆದಿದೆ. ಜಿಲ್ಲೆಯ ಚಿತ್ತಾಪುರದಲ್ಲಿ ಕಾರ್ಯಕ್ರಮ ನಡೆಸಲು ಸೂಲಿಬೆಲೆ ಅವರಿಗೆ ಅನುಮತಿಯೂ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸೂಲಿಬೆಲೆ ಅವರನ್ನು ಫೆಬ್ರವರಿ 28ರ ರಾತ್ರಿ ಕಮಲಾಪುರ ಬಳಿ ಪೊಲೀಸರು ತಡೆದು ವಾಪಸ್ ಕಳುಹಿಸಿದ್ದರು. ಸೂಲಿಬೆಲೆ ಅವರ ಭಾಷಣದಿಂದ ಜಿಲ್ಲೆಯಲ್ಲಿ ಶಾಂತಿ ಕದಡುತ್ತದೆ ಎಂಬ ಕಾರಣಕ್ಕೆ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು.