ಪಿ.ಎಚ್.ಡಿ. ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿ ನಿಗೂಢ ನಾಪತ್ತೆ, ಮುಸ್ಲಿಂ ಅಪಹರಿಸಿರುವ ಶಂಕೆ !

ಮಂಗಳೂರು – ಇಲ್ಲಿನ ಕೋಟೆಕಾರು ಬಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ‘ಪಿ.ಎಚ್.ಡಿ.’ ವ್ಯಾಸಾಂಗ ಮಾಡುತ್ತಿದ್ದ ಚೈತ್ರಾ ಹೆಬ್ಬಾರ್ ವಾರದ ಹಿಂದೆ ನಾಪತ್ತೆಯಾಗಿದ್ದರು. ಇದೊಂದು ಲವ್ ಜಿಹಾದ್ ಪ್ರಕರಣ ಎನ್ನಲಾಗುತ್ತಿದೆ. ಚೈತ್ರಾಳು ಪುತ್ತೂರಿನ ಕುರ್ನಾಡ್ಕದಲ್ಲಿ ವಾಸಿಸುತ್ತಿದ್ದ ಬಂಟ್ವಾಳ ಮೂಲದ ಮುಸ್ಲಿಂ ಯುವಕ ನೀಡುತ್ತಿದ್ದ ಗಾಂಜಾ ಚಟಕ್ಕೆ ಬಿದ್ದಿದ್ದಳು. ಈ ಮುಸ್ಲಿಂ ಯುವಕ ಚೈತ್ರಾಳನ್ನು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಚೈತ್ರಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

1. ಚೈತ್ರಾ ತಂಗಿದ್ದ ಸ್ಥಳಕ್ಕೆ ಶಂಕಿತ ಮುಸ್ಲಿಂ ಯುವಕ ಆಕೆಯನ್ನು ಭೇಟಿಯಾಗಲು ಬರುತ್ತಿದ್ದ ಎಂದು ಬಜರಂಗದಳ ಕಾರ್ಯಕರ್ತರು ಚೈತ್ರಾ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು.

2. ಇದಾದ ಕೆಲವೇ ದಿನಗಳಲ್ಲಿ ಚೈತ್ರಾ ಹೆಬ್ಬಾರ್ ನಾಪತ್ತೆಯಾಗಿದ್ದಾಳೆ. ಪೊಲೀಸರಿಗೆ ದೂರು ನೀಡಿ ವಾರ ಕಳೆದರೂ ಚೈತ್ರಾ ಪತ್ತೆಯಾಗಿಲ್ಲ.

3. ‘ಇನ್ನು 2 ದಿನಗಳಲ್ಲಿ ಚೈತ್ರಾ ಪತ್ತೆಯಾಗದಿದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳದ ಪ್ರಾಂತ ಸಂಚಾಲಕ ಮುರಳಿಕೃಷ್ಣ ತಡಕಾ ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪಿ.ಎಚ್.ಡಿ. ಮಾಡುವ ಸುಶಿಕ್ಷಿತ ಹಿಂದೂ ಹುಡುಗಿ ಲವ್ ಜಿಹಾದ್‌ಗೆ ಬಲಿಯಾಗುತ್ತಾಳೆ, ಇದು ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣ ಎಷ್ಟು ಅವಶ್ಯಕತೆ ಇದೆ ಎಂದು ತೋರಿಸುತ್ತದೆ !