
ನಿರ್ಮಲ (ತೆಲಂಗಾಣ) – ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಕಾಂಗ್ರೆಸ್ಸಿನ ಪ್ರಮುಖ ನಾಯಕರಿಗೆ ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮದ ಆಮಂತ್ರಣವಿತ್ತು. ಆದರೂ ಅವರು ಕಾರ್ಯಕ್ರಮಕ್ಕೆ ಏಕೆ ಉಪಸ್ಥಿತರಾಗಲಿಲ್ಲ ? ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಮಾರಂಭಕ್ಕೆ ನೀವು ಏಕೆ ಹೋಗಲಿಲ್ಲ ? ನಿಮಗೆ ಹಿಂದೂಗಳ ಮೇಲೆ ಪ್ರೀತಿ ಇಲ್ಲವೇ ? ನೀವು ಯಾವಾಗಲೂ `ರಝಾಕಾರ’ (ಆಗಿನ ಹೈದರಾಬಾದ ಸಂಸ್ಥಾನದ ನಿಜಾಮನ ಸೈನ್ಯ) ಮತ್ತು ಬಾಬರರ ಬೆಂಬಲಕ್ಕೆ ನಿಲ್ಲುವರೇ ? ದೇಶವಾಸಿಗಳು ಎಂದಿಗೂ ರಜಾಕಾರ ಮತ್ತು ಬಾಬರನ ಬೆಂಬಲಕ್ಕೆ ನಿಲ್ಲುವುದಿಲ್ಲ, ಎಂದು ಅಸ್ಸಾಮಿನ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವ ಸರಮಾರವರು ಕಾಂಗ್ರೆಸ್ಸನ್ನು ಟೀಕಿಸಿದರು. ಲೋಕಸಭಾ ಚುನಾವಣೆಯ ಮೊದಲು ಭಾಜಪದ ವಿಜಯ ಸಂಕಲ್ಪ ಯಾತ್ರೆಯ ಶುಭಾರಂಭದ ಸಂದರ್ಭದಲ್ಲಿ ಬೈನ್ಸಾದಲ್ಲಿ ಒಂದು ಜಾಹಿರ ಸಭೆಯಲ್ಲಿ ಮುಖ್ಯಮಂತ್ರಿ ಸರಮಾರವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಸರಮಾರವರು ಮಾತು ಮುಂದುವರಿಸುತ್ತಾ, ರಾಹುಲ್ ಗಾಂಧಿಯವರ `ಭಾರತ ಜೋಡೋ ನ್ಯಾಯ ಯಾತ್ರೆ’ ಹೋದಲ್ಲೆಲ್ಲ ಕಾಂಗ್ರೆಸ್ ಕುಸಿಯುತ್ತಿದೆ. ಈಗ ರಾಹುಲ್ ಗಾಂಧಿ ಉತ್ತರಪ್ರದೇಶಕ್ಕೆ ಹೋಗಲಿದ್ದಾರೆ; ಆದರೆ ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ ಯಾದವರೊಂದಿಗೆ ಅವರ ಭಿನ್ನಮತವಿದೆ. ನ್ಯಾಯ ಯಾತ್ರೆಯಲ್ಲಿ ಹೋದಲ್ಲೆಲ್ಲ ಕಾಂಗ್ರೆಸ್ಸಿನ ಮೇಲೆ ಅನ್ಯಾಯವಾಗುವುದು. ರಾಹುಲ್ ಗಾಂಧಿ ಸುಳ್ಳು ಮಾತನಾಡುವುದನ್ನು ಬಿಟ್ಟು ಬೇರೆ ಏನು ಕಲಿತಿಲ್ಲ. ರಾಹುಲ್ ಗಾಂಧಿ ಮೊದಲನೇ ಬಾರಿ ಭಾರತ ಯಾತ್ರೆ ನಡೆಸಿದ್ದಾಗ ಕಾಂಗ್ರೆಸ್ ಮೂರು ರಾಜ್ಯದಲ್ಲಿನ ಚುನಾವಣೆಯಲ್ಲಿ ಸೋಲು ಅನುಭವಿಸಿತ್ತು. ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ದೇಶದಲ್ಲಿ ಸೋಲಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ೩೦ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ !’ – ಮುಖ್ಯಮಂತ್ರಿ ಸರಮಾ
Assam chief minister Himanta Biswa Sarma said that Congress is facing setback wherever Rahul Gandhi’s ‘#BharatJodoNyayYatra‘ passes through.
He further hit at Congress leader and said that he has learned nothing but lies.
Read more here: https://t.co/i8OfhUi7iB pic.twitter.com/8sFx42bBCt
— The Times Of India (@timesofindia) February 21, 2024
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!