ಭೋಪಾಲ(ಮಧ್ಯಪ್ರದೇಶ)ದವರಾದ ರಘುನಂದನ ಸಿಂಹ ರಾಜಪೂತ ರವರ ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮಕ್ಕೆ ಸದಾಶಯದ ಭೇಟಿ !

ಎಡದಿಂದ ಶ್ರೀ. ರಘುನಂದನ ಸಿಂಹ ರಾಜಪೂತ, ಜಿತೇಂದ್ರ ರಘುವಂಶಿ, ರಾಜೀವ ಗುಪ್ತ, ಗಣೇಶ ರಾಮ ನಾಗರ, ಧೀರಜ ಸಿಂಹ ದಾಂಗಿ ಮತ್ತು ಅವರಿಗೆ ಮಾಹಿತಿ ನೀಡುತ್ತಿರುವ ಶ್ರೀ. ಅಭಿಷೇಕ ಪೈ

ಫೊಂಡಾ (ಗೋವಾ) – ಭೋಪಾಲದಲ್ಲಿನ ಕಟ್ಟಡಕಾಮಗಾರಿಯ ಉದ್ಯಮದಲ್ಲಿರುವ ಶ್ರೀ. ರಘುನಂದನ ಸಿಂಹ ರಾಜಪೂತ ರವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದಾಶಯದಿಂದ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಅವರ ಕುಟುಂಬದವರು ಮತ್ತು ಮಿತ್ರವೃಂದವು ಉಪಸ್ಥಿತವಿತ್ತು. ಸನಾತನದ ಸಾಧಕರಾದ ಶ್ರೀ. ಅಭಿಷೇಕ ಪೈ ಮತ್ತು ಗಿರಿಜಯ ಪ್ರಭುದೇಸಾಯಿಯವರು ಅವರಿಗೆ ಆಶ್ರಮದಲ್ಲಿ ನಡೆಯುವ ಆಧ್ಯಾತ್ಮ, ರಾಷ್ಟ್ರಧರ್ಮ ಮತ್ತು ಸಂಶೋಧನಾ ಕಾರ್ಯದ ಕುರಿತು ಮಾಹಿತಿ ನೀಡಿದರು.

ಶ್ರೀ. ರಘುನಂದನ ಸಿಂಹ ರಾಜಪೂತ ರವರು ವ್ಯಕ್ತಪಡಿದ ಅಭಿಪ್ರಾಯ !

ಆಶ್ರಮದಲ್ಲಿ ಪೂರ್ಣಕಾಲೀನ ಸಾಧನೆಯಲ್ಲಿರುವ ಸಾಧಕರು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ನಿಸ್ವಾರ್ಥ ಭಾವದಿಂದ ಅಡುಗೆ ಮನೆ, ಸನಾತನ ಪ್ರಭಾತ’ ನಿಯತಕಾಲಿಕೆಗಳ, ಗ್ರಂಥ, ತಾಂತ್ರಿಕ ಸೇವೆ, ಹಿಂದೂ ಧರ್ಮದ ಪ್ರಚಾರ-ಪ್ರಸಾರ ಹೇಗೆ ಅನೇಕ ಸೇವೆಗಳನ್ನು ಮಾಡುತ್ತಾರೆ. ಆಶ್ರಮದಲ್ಲಿನ ವಾತಾವರಣವನ್ನು ನೋಡಿ ನಮ್ಮ ಮನಸ್ಸು ತುಂಬಿಹೋಯಿತು. ಸನಾತನ ಆಶ್ರಮದಲ್ಲಿನ ಗುರುಗಳು ಮತ್ತು ಸಾಧಕರಿಗೆ ಕೋಟಿ ಕೋಟಿ ನಮನಗಳು !