ಭಯೋತ್ಪಾದಕರು ದರ್ಗಾಗೆ ನುಗ್ಗಿದ್ದಾರೆಂದು ಸುಳ್ಳು ಮಾಹಿತಿ ನೀಡಿದ ೮೪ ವರ್ಷದ ಮತಾಂಧನ ಬಂಧನ !

ಡೋಂಗ್ರಿ (ಮುಂಬಯಿ)ನ ಘಟನೆ !

ಮುಂಬಯಿ – ದಕ್ಷಿಣ ಮುಂಬಯಿ ಪ್ರದೇಶದ ಡೋಂಗ್ರಿಯ ಬಾಬಾ ದರ್ಗಾದಲ್ಲಿ ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ನುಗ್ಗಿದ್ದಾರೆಂದು ಅನಾಮಧೇಯ ಸಂಪರ್ಕ ಮಾಡಿದ್ದ ೮೪ ವರ್ಷದ ಭಗವಾನ್ ಭಾಪ್ಕರ್ ಅಲಿಯಾಸ್ ನಜ್ರುಲ್ ಇಸ್ಲಾಂ ಶೇಖ್ ನನ್ನು ಬಂಧಿಸಲಾಗಿದೆ. (ಈ ಮತಾಂಧನು ‘ಭಗವಾನ್ ಭಾಪ್ಕರ್’ ಎಂಬ ಹಿಂದೂ ಹೆಸರನ್ನು ಏಕೆ ಇಟ್ಟುಕೊಂಡಿದ್ದಾನೆ ಎಂಬುದನ್ನು ಸಹ ತನಿಖೆ ಮಾಡುವುದು ಅವಶ್ಯಕತೆ! – ಸಂಪಾದಕರು) ಈತ ವಿಕ್ರೋಲಿಯ ನಿವಾಸಿಯಾಗಿದ್ದಾನೆ. ಸಂಪರ್ಕದ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ತನಿಖೆಯ ನಂತರ ದರ್ಗಾದೊಳಗೆ ಯಾರೂ ಪ್ರವೇಶಿಸಿಲ್ಲ ಎಂಬುದು ಸ್ಪಷ್ಟವಾಯಿತು. ಈ ಪ್ರಕರಣದಲ್ಲಿ ನಜ್ರುಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಭಯೋತ್ಪಾದಕರ ಬಗ್ಗೆ ಸುಳ್ಳು ಮಾಹಿತಿ ನೀಡಿ ಪೋಲೀಸ್ ಪಡೆಯ ಸಮಯ ಮತ್ತು ಮಾನವಶಕ್ತಿಯನ್ನು ವ್ಯರ್ಥ ಮಾಡುತ್ತಿರುವ ಇಂತಹ ಸಮಾಜವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !