ಹಿಂದೂ ಯುವಕನು ಸ್ಮಶಾನದಲ್ಲಿ ಮರದ ಕೊಂಬೆಯನ್ನು ಕತ್ತರಿಸಿದ್ದರಿಂದ ಮತಾಂಧ ಮುಸ್ಲಿಮರಿಂದ ಥಳಿತ

ಶಿವಮೊಗ್ಗ – ಇಲ್ಲಿನ ಜಂಬರಘಟ್ಟ ಗ್ರಾಮದ ಮುಸಲ್ಮಾನರ ಸ್ಮಶಾನದಲ್ಲಿ ಮರದ ಕೊಂಬೆಯನ್ನು ಕಡಿದಿದ್ದಕ್ಕೆ ರವಿ ಎಂಬ ಯುವಕನ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ. ರವಿ ಕುರುಬನಾಗಿದ್ದು ಕುರಿಗಳನ್ನು ಕಟ್ಟಲು, ಸ್ಮಶಾನಕ್ಕೆ ಹೋಗಿ ಅಲ್ಲಿದ್ದ ಮರದ ಕೊಂಬೆಯನ್ನು ಕತ್ತರಿಸಿ ಅದರಿಂದ ಕಂಬವನ್ನು ತಯಾರಿಸಿದ್ದನು. ಇದಕ್ಕಾಗಿ ಆತನನ್ನು ಥಳಿಸಲಾಗಿದೆ.

ಈ ಪ್ರಕರಣ ಗ್ರಾಮ ಸಮಿತಿಯವರೆಗೆ ತಲುಪಿತು. ಸಮಿತಿ ಸದಸ್ಯರು ‘ಕ್ಷುಲ್ಲಕ ಘಟನೆಯನ್ನು ದೊಡ್ಡದು ಮಾಡಬೇಡಿ’ ಎಂದು ಸಲಹೆ ನೀಡಿದರು. ಇದ್ಯಾವುದಕ್ಕೂ ಸುಮ್ಮನಿರದ ಕೆಲ ಮುಸ್ಲಿಮರು ರವಿ ಮನೆ ಮುಂದೆ ಗಲಾಟೆ ನಡೆಸಿದರು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಅಲ್ಲಿ ಜಮಾಯಿಸಿದ್ದು, ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಇದರಿಂದ ಕೆಲವರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಹಿಂದೂ ಮಹಿಳೆಯರ ಮೇಲೂ ಹಲ್ಲೆ ನಡೆದಿದ್ದರಿಂದ ಮಹಿಳೆಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.