ದೆಹಲಿಯ ಜಾಮಿಯಾ ಮಿಲಿಯ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ‘ರಾಮ ಕೀ ಕಬ್ರ ಖುದೆಗಿ, ಜಾಮಿಯಾ ಕಿ ಧರತಿ ಪರ, ಘೋಷಣೆ !

ನವ ದೆಹಲಿ – ಇಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಜನವರಿ ೨೨ರಂದು ‘ಜಸ್ಟಿಸ್ ಫಾರ್ ಬಾಬ್ರಿ’ ‘ಫೈಟ್ ಫಾರ್ ಬಾಬ್ರಿ’ ಮತ್ತು ‘ಬಾಯ್ ಕಾಟ್ ಫಾರ್ ಬಾಬ್ರಿ’ ಹೇಗೆ ಘೋಷಣೆ ನೀಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಒಂದು ವಿಡಿಯೋದಲ್ಲಿ ೨ ಗುಂಪಿನ ನಡುವೆ ಜಟಾಪಟಿ ನಡೆದಿರುವುದು ಕಂಡು ಬಂದಿದೆ. ಇದರಲ್ಲಿ ‘ರಾಮ ಕೀ ಕಬ್ರ ಖುದೆಗಿ, ಜಾಮಿಯಾ ಕೀ ಧರತಿ ಪರ’ ಹೀಗೆ ಘೋಷಣೆ ನೀಡಿದರೆಂದು ಆರೋಪಿಸಿದ್ದಾರೆ. ಈ ಘಟನೆ ವಿಶ್ವವಿದ್ಯಾಲಯದಲ್ಲಿನದ್ದಾಗಿದೆ ಎಂದು ಪೊಲೀಸ ಅಧಿಕಾರಿ ರಾಜೇಶ ದೇವ ಇವರು ಹೇಳಿದರು. ಈ ಘಟನೆಯಿಂದ ವಿಶ್ವವಿದ್ಯಾಲಯದ ಹೊರಗೆ ಪೊಲೀಸ ನೇಮಕ ಮಾಡಿದ್ದಾರೆ. ಈಗ ಅಲ್ಲಿ ಶಾಂತಿಯ ಸ್ಥಿತಿ ಇದೆ.

ಸಂಪಾದಕೀಯ ನಿಲುವು

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಕಟ್ಟಲಾಯಿತು, ಆದರೂ ದೇಶದಲ್ಲಿ ರಾವಣನಂತಹ ಅಸುರರ ಪ್ರಭಾವ ಮುಂದುವರೆದಿದೆ. ಇಂತಹವರನ್ನು ಸರಿ ದಾರಿಗೆ ತರಲು ದೇಶದಲ್ಲಿ ಹಿಂದೂ ರಾಷ್ಟ್ರದ, ರಾಮರಾಜ್ಯದ ಆವಶ್ಯಕತೆ ಇದೆ. ಅದಕ್ಕಾಗಿ ಈಗ ಹಿಂದೂಗಳು ಕಟಿಬದ್ಧರಾಗುವುದು ಆವಶ್ಯಕವಾಗಿದೆ.