ಮಣಿಪುರದಲ್ಲಿ ಅಸ್ಸಾಂ ರೈಫಲ್ಸಿನ ಸೈನಿಕನಿಂದ ೬ ಸಹಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣು !

ಇಂಪಾಲ (ಮಣಿಪುರ) – ಚಂದೆಲ ಜಿಲ್ಲೆಯಲ್ಲಿನ ಸಾಜಿಕ ಟೆಂಪಕ್ ಇಲ್ಲಿ ಅಸ್ಸಾಂ ರೈಫಲ್ಸ್ ನ ಓರ್ವ ಸೈನಿಕನು ತನ್ನ ೬ ಸಹಕಾರಿಗಳ ಮೇಲೆ ಗುಂಡು ಹಾರಿಸಿದನು ಮತ್ತು ನಂತರ ತಾನೂ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು. ಈ ಎಲ್ಲಾ ಸೈನಿಕರು ಮ್ಯಾನ್ಮಾರ್ ಗಡಿಯಲ್ಲಿ ನೇಮಕಗೊಂಡಿದ್ದರು. ಈ ಎಲ್ಲಾ ಗಾಯಗೊಂಡಿರುವ ಸೈನಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅವರ ಆರೋಗ್ಯ ಸ್ಥಿರವಾಗಿ ಇದೆ, ಎಂದು ಹೇಳಿದರು. ಈ ಘಟನೆ ಯಾವ ಕಾರಣದಿಂದ ನಡೆದಿದೆ ಇದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಅಸ್ಸಾಂ ರೈಫಲ್ಲಿನ ಪೊಲೀಸ ಅಧಿಕಾರಿಯು, ಈ ಎಲ್ಲಾ ಸೈನಿಕರು ಮಣಿಪುರದ ಹೊರಗಿನವರಾಗಿದ್ದಾರೆ. ಈ ಘಟನೆಯ ಜೊತೆಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಯಾವುದೇ ಸಂಬಂಧವಿಲ್ಲ, ಎಂದು ಹೇಳಿದ್ದಾರೆ.

(ಸೌಜನ್ಯ – Hindustan Times)