ಶ್ರೀ ರಾಮಲಲಾನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಅಯೋಧ್ಯೆಯ ಪ್ರವೇಶದ್ವಾರದಲ್ಲಿ ಕಾಯುತ್ತಿದ್ದಾರೆ !

ಅಯೋಧ್ಯೆ, ಜನವರಿ 22 (ಸುದ್ದಿ.) – ಜನವರಿ 22 ರಂದು, ಭದ್ರತಾ ಕಾರಣಗಳಿಗಾಗಿ ಶ್ರೀ ರಾಮ ಜನ್ಮಭೂಮಿಯಲ್ಲಿ ಹೊಸ ದೇವಾಲಯದ ಸ್ಥಳಕ್ಕೆ ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶಿಸಲು ಅವಕಾಶವಿತ್ತು; ಆದರೆ, ಇದರ ಹೊರತಾಗಿಯೂ ಅಯೋಧ್ಯಾನಗರಿ ಪ್ರವೇಶ ದ್ವಾರದಲ್ಲಿ ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಇದರೊಂದಿಗೆ ಶ್ರೀರಾಮಲಲಾನ ದರ್ಶನಕ್ಕೆ ಲಕ್ಷಾಂತರ ಭಕ್ತರು ಅಯೋಧ್ಯಾನಗರಕ್ಕೆ ಆಗಮಿಸಿದ್ದಾರೆ. ಜನವರಿ 23 ರಿಂದ ಶ್ರೀ ರಾಮಲಲಾನ ದರ್ಶನವನ್ನು ಸಾಮಾನ್ಯ ಜನರು ಪಡೆಯಬಹುದಾಗಿದೆ. ಈ ಎಲ್ಲ ಭಕ್ತರು ಶ್ರೀರಾಮಲಲಾನ ದರ್ಶನಕ್ಕಾಗಿ ಕಾಯುತ್ತಿದ್ದಾರೆ.