ಪಂಜಾಬದಲ್ಲಿ ಗುರುದ್ವಾರ ಅಪವಿತ್ರಗೊಳಿಸಿರುವ ಅನುಮಾನದಿಂದ ನೀಹಂಗನಿಂದ ಯುವಕನ ಹತ್ಯೆ !

(ನೀಲಿ ಬಣ್ಣದ ಬಟ್ಟೆ ಧರಿಸಿ ಶಸ್ತ್ರಗಳನ್ನು ಇಟ್ಟುಕೊಳ್ಳುವ ಸಿಖ್ ಯೋಧನಿಗೆ ನೀಹಂಗ ಸಿಖ್ ಎನ್ನುತ್ತಾರೆ.)

ಕಾಪುರಥಳಾ (ಪಂಜಾಬ) – ಫಗವಾಡ ಇಲ್ಲಿಯ ಗುರುದ್ವಾರ ಚೌರಾ ಖುಹ ಸಾಹೇಬ ಅಪವಿತ್ರ ಆಗಿರುವ ಅನುಮಾನದಿಂದ ಲುಧಿಯನಾದ ನೀಹಂಗ ರಮಣದೀಪ ಸಿಂಗ ಮಂಗೂ ಮಠ ಈತನು ಓರ್ವ ಯುವಕನನ್ನು ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಜನವರಿ ೧೬ ರಂದು ಬೆಳಿಗ್ಗೆ ೩ ಗಂಟೆಗೆ ಈ ಘಟನೆ ಘಟಿಸಿದೆ.

ಹತ್ಯೆಯ ಮಾಹಿತಿ ದೊರೆಯುತ್ತದೆ ಪೊಲೀಸರು ಅಲ್ಲಿಗೆ ತಲುಪಿದ ನಂತರ ನೀಹಂಗ ರಮಣದೀಪ ಸಿಂಗ ಮಂಗೂ ಮಠ ಇವನನ್ನು ಬಂಧಿಸಿದ್ದಾರೆ. ಹತ್ಯೆಯ ಮೊದಲು ಅವನು ಯುವಕನ ವಿಡಿಯೋ ಮಾಡಿದ್ದಾನೆ. ಅದರಲ್ಲಿ ಆ ಯುವಕ ಗುರುದ್ವಾರ ಅಪಪವಿತ್ರ ಮಾಡುವುದಕ್ಕಾಗಿ ಇಲ್ಲಿ ಬಂದಿದ್ದಾನೆ ಮತ್ತು ಅದಕ್ಕಾಗಿ ಅವನಿಗೆ ೨ – ೩ ಸಾವಿರ ರೂಪಾಯಿ ಸಿಗುವುದೆಂದು ಹೇಳುತ್ತಿದ್ದಾನೆ. ಯುವಕನು ಸುಖಿ ಹೆಸರಿನ ವ್ಯಕ್ತಿಯು ಅವನಿಗೆ ಕಳುಹಿಸಿರುವುದಾಗಿ ಹೇಳಿದ್ದಾನೆ, ಎಂದು ಹೇಳಿದ.