ಉನ್ನಾವ್ ದಲ್ಲಿ (ಉತ್ತರ ಪ್ರದೇಶ) ಮತಾಂಧರು ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕನ ಕೊಲೆ !

ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಭಂಡಾರಕ್ಕೆ ಹಿಂದೂಗಳು ಚಂದಾ ವಸೂಲಿ ಮಾಡುತ್ತಿದ್ದಾಗ ಮತಾಂಧರಿಂದ ದಾಳಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !

ಉನ್ನಾವ್ (ಉತ್ತರ ಪ್ರದೇಶ) – ಇಲ್ಲಿನ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಗೋತಾಖೋರ್‌ನಲ್ಲಿ ಗೂಂಡಾ ಕಾಲೆ ಖಾನ್ ಮತ್ತು ಆತನ ಸಹಚರರು ನಡೆಸಿದ ಕಲ್ಲು ಮತ್ತು ಇಟ್ಟಿಗೆ ದಾಳಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ವಿನೋದ್ ಕಶ್ಯಪ್ ಸಾವನ್ನಪ್ಪಿದ್ದಾರೆ. ಅವರ ಸಹೋದರ ದುರ್ಗಾ ಶಂಕರ್ ಕಶ್ಯಪ್ ಗಾಯಗೊಂಡಿದ್ದಾರೆ.

ಇಲ್ಲಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಂಡಾರಕ್ಕಾಗಿ ಚಂದಾ ವಸೂಲಿ ಮಾಡುವಾಗ ಹಿಂದೂಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಿದ್ದರು. ಆ ಸಮಯದಲ್ಲಿ ಕಾಲೆ ಖಾನ್ ಅದನ್ನು ವಿರೋಧಿಸಿದರು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಕಾಲೆ ಖಾನ್ ಹಿಂದೂಗಳಿಂದ ಚಂದಾ ಹಣವನ್ನು ಸುಲಿಗೆ ಮಾಡಲು ಯತ್ನಿಸಿದ. ಅದಕ್ಕೆ ಹಿಂದೂಗಳು ವಿರೋಧಿಸಿದ ನಂತರ, ಕಾಲೆ ಖಾನ್ ಮತ್ತು ಅವನ ಸಹಚರರು ಕಲ್ಲು ತೂರಾಟ ನಡೆಸಿದರು. ಈ ಮಾಹಿತಿ ಪಡೆದ ವಿನೋದ್ ಕಶ್ಯಪ್ ಅಲ್ಲಿಗೆ ತಲುಪಿದರು. ಆತನನ್ನು ಕಾಲೆ ಖಾನ್ ಕಲ್ಲು ಮತ್ತು ಇಟ್ಟಿಗೆಗಳಿಂದ ಹೊಡೆದು ಕೊಂದಿದ್ದಾನೆ. ಹಿಂಸಾಚಾರದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ ಎಂದೂ ಆರೋಪಿಸಲಾಗಿದೆ. ಈ ಘಟನೆಯ ನಂತರ ಹಿಂದೂಗಳು ರಸ್ತೆ ತಡೆದು ಪ್ರತಿಭಟಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದಾರೆ.