Ayodhya RamMandir PranPratishta : ಶ್ರೀರಾಮಲಲ್ಲಾನ ಟೆಂಟ್ ನಲ್ಲಿ ನೋಡಿ ಕಳೆದ ೨೩ ವರ್ಷದಿಂದ ಮದುವೆಯಾಗದೇ ಮತ್ತು ಚಪ್ಪಲಿ ಹಾಕದೆ ಇದ್ದ ಬಿಹಾರದ ದೇಬು ದಾಸ !

ಕಿಶನಗಂಜ (ಬಿಹಾರ) – ಇಲ್ಲಿಯ ದೇಬು ದಾಸ ಈ ರಾಮಭಕ್ತನು ಕಳೆದ ೨೩ ವರ್ಷಗಳಿಂದ ಚಪ್ಪಲಿ ಹಾಕಿಲ್ಲ. ಅವರು ೨೦೦೧ ರಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮ ಭೂಮಿಯ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಅವರು ಶ್ರೀರಾಮಲಲ್ಲಾನನ್ನು ಟೆಂಟ್ ನಲ್ಲಿ ಇಟ್ಟಿರುವುದನ್ನು ನೋಡಿದ ನಂತರ ‘ಎಲ್ಲಿಯವರೆಗೆ ಇಲ್ಲಿ ಶ್ರೀರಾಮ ಮಂದಿರ ಕಟ್ಟುವುದಿಲ್ಲ ಅಲ್ಲಿಯವರೆಗೆ ಮದುವೆಯಾಗುವುದಿಲ್ಲ ಮತ್ತು ಕಾಲಿಗೆ ಚಪ್ಪಲಿ ಹಾಕುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದರು. ಅಲ್ಲಿಂದ ಅವರು ಮದುವೆಯಾಗದೇ ಬರಿಗಾಲದಲ್ಲಿ ನಡೆಯುತ್ತಾರೆ. ಈಗ ಶ್ರೀ ರಾಮ ಮಂದಿರದ ಉದ್ಘಾಟನೆ ನಡೆಯುವುದು, ಈಗ ಮಂದಿರದ ದರ್ಶನ ಪಡೆದ ನಂತರ ಚಪ್ಪಲಿ ಹಾಕುವರು. ದೇಬು ದಾಸ ಇವರು, ಶ್ರೀ ರಾಮನ ಕೃಪೆಯಿಂದ ಕಳೆದ ೨೩ ವರ್ಷದಿಂದ ನನ್ನ ಕಾಲಿಗೆ ಎಂದು ಮುಳ್ಳು ಕೂಡ ಚುಚ್ಚಿಲ್ಲ ಎಂದು ಹೇಳಿದರು.

ಭಾಜಪದ ಕಿಶನಗಂಜದ ಜಿಲ್ಲಾಧ್ಯಕ್ಷ ಸುಶಾಂತ ಗೋಪ ಇವರು, ದೇಬು ದಾಸ ಇವರು ಇಲ್ಲಿಯವರೆಗೆ ಅನೇಕ ಅನುಷ್ಠಾನದ ಆಯೋಜನೆ ಮಾಡಿದ್ದಾರೆ. ಅವರು ೨ ಸಾವಿರದ ೫೦೦ ಶವ ಸಂಸ್ಕಾರ ಕೂಡ ಮಾಡಿದ್ದಾರೆ. ರಕ್ತದಾನದ ಕಾರ್ಯಕ್ರಮದಲ್ಲಿ ಕೂಡ ಅವರು ನೇತೃತ್ವ ವಹಿಸಿದ್ದರೆ, ಎಂದು ಹೇಳಿದರು.