ದೇವರು ಕೇವಲ ದೇವಸ್ಥಾನದಲ್ಲಿ ಮಾತ್ರ ಇಲ್ಲ, ಅವನು ಎಲ್ಲರ ಮನಸ್ಸಿನಲ್ಲಿಯೂ ಇದ್ದಾನೆ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ !

ಬೆಂಗಳೂರು – ‘ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದಿದ್ದರೆ, ಆ ದೇವಸ್ಥಾನವನ್ನು ಬಹಿಷ್ಕರಿಸಿರಿ. ನೀವೇ ದೇವಸ್ಥಾನವನ್ನು ಕಟ್ಟಿ ನೀವೇ ಪೂಜೆಯನ್ನು ಮಾಡಿರಿ’, ಎಂದು ಸಂತ ನಾರಾಯಣ ಗುರುಗಳು ಹೇಳಿದ್ದರು. `ದೇವರು ಇಲ್ಲ’ ಎಂದು ನಾನು ಹೇಳುವುದಿಲ್ಲ; ಆದರೆ `ಅವನು ಕೇವಲ ದೇವಸ್ಥಾನದಲ್ಲಿಯೇ ಇದ್ದಾನೆ’, ಎಂದು ಯಾರಾದರೂ ಹೇಳಿದರೆ ಅದನ್ನು ನಾನು ಒಪ್ಪುವುದಿಲ್ಲ, `ಅವನು ಎಲ್ಲರ ಮನಸ್ಸಿನಲ್ಲಿಯೂ ಇದ್ದಾನೆ’, ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದರು. ಅವರು ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.