ನಾವು ಶ್ರೀರಾಮ ಮಂದಿರದಿಂದ ರಾಜಕೀಯ ಮಾಡುವುದಿಲ್ಲ ! – ಸಚಿವ ಇಕ್ಬಾಲ್ ಹುಸೇನ್

ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಇಕ್ಬಾಲ್ ಹುಸೇನ್ ಹೇಳಿಕೆ !

ರಾಮನಗರ – ರಾಮನಗರದಲ್ಲಿ ನಾನು ರಾಮೋತ್ಸವವನ್ನು ಅತ್ಯಂತ ಭಕ್ತಿಯಿಂದ ಮಾಡುತ್ತೇನೆ. ನಾನು ರಾಮನ ಭಕ್ತನಾಗಿದ್ದೇನೆ. ಬಾಲ್ಯದಿಂದಲೂ ನಾನು ಶ್ರೀರಾಮ ಸೇರಿದಂತೆ ಎಲ್ಲ ದೇವರನ್ನು ಪೂಜಿಸುತ್ತೇನೆ. ಕೆಲವರು ಶ್ರೀರಾಮ ಮಂದಿರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರಬಹುದು; ಆದರೆ ನಾವು ರಾಜಕೀಯ ಮಾಡುವುದಿಲ್ಲ. ಜನರಲ್ಲಿ ಬಿರುಕು ಮೂಡಿಸಲು ರಾಜಕಾರಣ ಮಾಡಲಾಗುತ್ತಿದೆ. ಕಾಂಗ್ರೆಸ್ ತನ್ನದೇ ಸಿದ್ದಾಂತಗಳನ್ನು ಹೊಂದಿದೆ. ಬಿಜೆಪಿಯವರಿಗೆ ಶ್ರೀರಾಮನ ಆರಾಧನೆ ಹೊಸತು; ಆದರೆ ಇದು ನಮಗೆ ಹೊಸದಲ್ಲ. ಇದು ನಿಮಗೆ ಹೊಸದಾಗಿದ್ದರಿಂದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಇಕ್ಬಾಲ್ ಹುಸೇನ್ ಪತ್ರಕರ್ತರು ‘ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ರಾಜಕೀಯ ನಡೆಯುತ್ತಿದೆಯೇ ? ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

(ಸೌಜನ್ಯ – Public TV)