ಭಾಜಪದ ಪದಾಧಿಕಾರಿ ರೂಬಿ ಖಾನ ಮನೆಯಲ್ಲಿ ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರಿಂದ ಜೀವ ಬೆದರಿಕೆ !

ಅಲಿಗಡ (ಉತ್ತರಪ್ರದೇಶ)ನ ಘಟನೆ !

ಅಲಿಗಡ (ಉತ್ತರಪ್ರದೇಶ) – ಭಾಜಪದ ಜಯಗಂಜ ವಿಭಾಗದ ಉಪಾಧ್ಯಕ್ಷೆ ರೂಬಿ ಆಸಿಫ ಖಾನ ಇವರು ಮನೆಯಲ್ಲಿ ಜನವರಿ ೪ ರಂದು ಶ್ರೀ ರಾಮನ ಪೂಜೆ ಮಾಡಿದ್ದರಿಂದ ಮತಾಂಧರು ಜೀವ ಬೆದರಿಕೆ ಹಾಕಿದ್ದಾರೆ. ಬೆದರಿಕೆಯ ಪತ್ರ ಅವರ ಮನೆಯಲ್ಲಿ ಹಾಕಲಾಗಿದೆ. ಈ ಪತ್ರದಲ್ಲಿ, ನೀವು ರಾಮಭಕ್ತರಾಗಿದ್ದೀರಾ. ಮುಂದಿನ ೭೨ ಗಂಟೆಯಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬವನ್ನು ಮುಗಿಸಲಾಗುವುದು ಎಂದು ಬರೆಯಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರಿಗೆ ದೂರ ನೀಡಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿಯಲ್ಲಿ ಕೆಲವು ಅಪರಿಚಿತರಿಂದ ಅವರ ಮನೆಯಲ್ಲಿ ಪತ್ರ ಎಸೆಯುವುದು ಕಂಡು ಬಂದಿದೆ. ಪೊಲೀಸರು ಈಗ ಅವರನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧರ ಸರ್ವಧರ್ಮ ಸಮಭಾವ ! ಈ ಬಗ್ಗೆ ದೇಶದಲ್ಲಿನ ಜಾತ್ಯತೀತರು ಎಂದಿಗೂ ಬಾಯಿ ಬಿಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !