ಜಾಲಂಧರ (ಪಂಜಾಬ) ಇಲ್ಲಿ ಪೊಲೀಸ ಅಧಿಕಾರಿಯ ಗುಂಡಿಕ್ಕಿ ಹತ್ಯೆ

ಜಾಲಂಧರ (ಪಂಜಾಬ) – ಇಲ್ಲಿ ಪೊಲೀಸ್ ಅಧಿಕಾರಿ ದಲಿಬೀರ ಸಿಂಹ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಶವ ರಸ್ತೆಯಲ್ಲಿ ದೊರೆತಿದೆ. ಅವರ ಹತ್ತಿರ ಇರುವ ಸರ್ವಿಸ್ ರಿವಾಲ್ವರ್ ಕೂಡ ಕಳವು ಮಾಡಲಾಗಿದೆ. ಪೋಲಿಸರು ಆರೋಪಿಯನ್ನು ಹುಡುಕುತ್ತಿದ್ದಾರೆ. ದಲಬೀರ ಸಿಂಹ ಇವರು ಓರ್ವ ಪ್ರಸಿದ್ಧ ವೇಟ್ ಲಿಫ್ಟರ್ ಆಗಿದ್ದು ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸ್ಥಳೀಯ ಮಾಹಿತಿಯ ಪ್ರಕಾರ ದಲಬೀರ ಸಿಂಹ ಇವರ ಜಾಲಂಧರದಲ್ಲಿನ ಒಂದು ಗ್ರಾಮದಲ್ಲಿನ ಕೆಲವು ಜನರ ಜೊತೆಗೆ ಸಂಘರ್ಷ ನಡೆದಿತ್ತು. ಆ ಸಮಯದಲ್ಲಿ ಅವರು ಸರ್ವಿಸ್ ರಿವಾರ್ ನಿಂದ ಗುಂಡು ಹಾರಿಸಿದ್ದರು; ಆದರೆ ಮರುದಿನ ಅವರು ಗ್ರಾಮಸ್ಥರ ಜೊತೆಗೆ ಸೇರಿ ಸಂಧಾನ ಮಾಡಿಸಿದ್ದರು.

ಸಂಪಾದಕೀಯ ನಿಲುವು

ಎಲ್ಲಿ ಪೋಲಿಸ್ ಅಧಿಕಾರಿಗಳೇ ಸುರಕ್ಷಿತವಾಗಿಲ್ಲ, ಅಲ್ಲಿ ಸಾಮಾನ್ಯ ಜನರು ಹೇಗೆ ಸುರಕ್ಷಿತವಾಗಿ ಇರುವರು ?